ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ನೆರಳಿನ ಬದುಕು

ಮೌನರಾಗಿರಣ್ಣ ಒಮ್ಮೆ ಮೌನರಾಗಿರಣ್ಣ
ದೇಹದೊಳಗಿನ ಕಲ್ಮಶ ಚೆಲ್ಲಿ
ಸಾಗರದಾಳದ ಪ್ರೀತಿಯ ತೋರಲು
ಮೌನರಾಗಿರಣ್ಣ ಒಮ್ಮೆ ಮೌನರಾಗಿರಣ್ಣ

ಆಸೆದಾಹವನು ಒಮ್ಮೆಲೆ ಸುಟ್ಟು
ಕೊಡುವ ದಾನವನು ಅರಿಯದೆ ಕೊಟ್ಟು
ಮನದ ಕೋಣೆಯಲಿ ಗಿಡವನು ನೆಟ್ಟು
ನೆರಳ ನೀಡಿರಣ್ಣ ನೀವು ನೆರಳ ನೀಡಿರಣ್ಣ

ಅನ್ನಕು ಒಂದು ಬಣ್ಣವನಿಟ್ಟು
ಬಣ್ಣವೇ ಇಲ್ಲದ ನೀರನು ಕೊಟ್ಟು
ಹಸಿವದಾಹವನು ನೀಗಿಸಿದವನ ನೋಡಣ್ಣ
ಆತ್ಮದೊಳಗೆ ನೀ ಮಾನವನಾಗಣ್ಣ

ಸಹಬಾಳ್ವೆಜೊತೆಯಲಿ ಸಹನೆ ಇರಲಿ ಅಣ್ಣ
ದೇವನಿರುವನಲ್ಲಿ ಒಮ್ಮೆ ಕಾಣಿರಣ್ಣ
ಕನ್ನಡ ತಾಯಿನೆಲದ ಸವಿಯನ್ನು ಉಣ್ಣಣ್ಣ
ಇದಕ್ಕಿಂತ ದೊಡ್ಡಭಾಗ್ಯ ಬೇರೇನು ಬೇಕಣ್ಣ


ಮನ್ಸೂರ್ ಮುಲ್ಕಿ

About The Author

Leave a Reply

You cannot copy content of this page

Scroll to Top