ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ-

ತುತ್ತು

ಹಲವು ಕನಸಿನ
ಭಾವ ಬುತ್ತಿಯ
ಮೊಸರು ಬೆಣ್ಣೆ
ತುತ್ತು ನೀನು

ಬಿಸಿಲು ತಣಿವಿಗೆ
ತಂಪು ನೀಡುವ
ರಾಗಿ ಅಂಬಲಿ
ಮಜ್ಜಿಗೆ

ತೊಯ್ವವ ಮಳೆಗೆ
ಹಿಡಿವ ಕೊಡೆಯು
ದೂರ ದಾರಿಯ
ಸಜ್ಜಿಗೆ

ಒಡಲ ಪ್ರೀತಿಯ
ಮುಗ್ಧ ಮನಸ್ಸು
ಗೂಡು ಕಟ್ಟಿದ
ಕಾವ್ಯ ನೀನು

ನನ್ನ ಬಾಳಿನ
ಮಿಣುಕು ಬೆಳಕು
ನನ್ನ ಬದುಕಿನ
ಜೀವವೆ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

14 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ತುತ್ತು”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    “ನನ್ನ ಬದುಕಿನ…….. “ಕೊನೆಯ ಸಾಲು…?
    ಸುಂದರ ಭಾವದ ಕವಿತೆ ಧನ್ಯವಾದಗಳು ಸರ್

  2. ಹಲವು ಕನಸಿನ ಭಾವ ಬುತ್ತಿಯ ತುತ್ತು ನೀನು… ಎಷ್ಟು ಅದ್ಭುತವಾದ ಪರಿಕಲ್ಪನೆಯು ನಿಮ್ಮ ಕವನದ ಸಾಲುಗಳಾಗಿ ಹೊರಹೊಮ್ಮಿವೆ…… ಸರ್

  3. ಸರ್ ಸಂಗಾತಿ ಪತ್ರಿಕೆಯಲ್ಲಿ ನಿತ್ಯ ನಿಮ್ಮ ಕವನಕ್ಕೆ ಕಾಯುತ್ತಿರುವೆ

  4. ಡಾ ವೀಣಾ ಹೂಗಾರ

    ಏಷ್ಟು ಸುಂದರ ಭಾವ ಕಿರಣ
    ನಿಮ್ಮ ಈ ಸುಂದರ ಕವನ

  5. Dr.Sharadamani.Hunashal

    ಹಲವು ಕನಸಿನ
    ಭಾವ ಬುತ್ತಿಯ
    ಮೊಸರು ಬೆಣ್ಣೆ
    ತುತ್ತು ನೀನು.. ತುಂಬಾ ಸುಂದರ ಕವನ ಸರ್..

Leave a Reply

You cannot copy content of this page

Scroll to Top