ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸತ್ಯ ಹೇಳುವ ಹೊತ್ತು

ಈಗ ಕಾಲ ಬದಲಾಗಿದೆ
ನಾವ್ಯಾರು ಸತ್ಯ ಹೇಳುವ ಹಾಗಿಲ್ಲ
ಉಸಿರುಗಟ್ಟಿದ ದಿನಗಳು
ಟಿವಿ ಪತ್ರಿಕೆ ಮಾಧ್ಯಮದವರು
ಆಳರಸರ ಗುಲಾಮರು
ಮಾರಿ ಕೊಂಡಿದ್ದಾರೆ ಹಣ ಹೆಂಡಕೆ
ರಾಜನ ದರ್ಬಾರು ವಿದೇಶ ಪ್ರಯಾಣ
ಆಗಾಗ ಬಾನುಲಿಯಲ್ಲಿಸುಳ್ಳಿನ ಸರಮಾಲೆ
ನಾವೆಲ್ಲರೂ ಚಪ್ಪಾಳೆ ತಟ್ಟ ಬೇಕು
ಅವರು ಹೇಳಿದಂತೆ ಕುಣಿಯಬೇಕು
ಬಂದೂಕು ಮಾತನಾಡುತ್ತವೆ
ದಾಬೋಲ್ಕರ ಪನ್ಸಾರೆ ಕಲಬುರ್ಗಿ ಗೌರಿ
ಹೆಣವಾದರು ಸತ್ಯವ ಹೇಳಿ
ಸುಳ್ಳು ಹೇಳುವವರಿಗೆ ಪ್ರಶಸ್ತಿ ಸಮ್ಮಾನ
ಮೋಸ ವಂಚನೆ ಮಾಡುವವರಿಗೆ
ರಾಜ ಮರ್ಯಾದೆ
ಸಾಲ ಮಾಡಿ ದೇಶ ಬಿಟ್ಟು ಹೋಗಬಹುದು
ಅವರ ಸಾಲ ಮನ್ನಾ
ಪಾಪ ರೈತರ ಆತ್ಮ ಹತ್ಯೆ ಇನ್ನೂ ನಿಂತಿಲ್ಲ
ನಾವು ಧ್ವಜ ಏರಿಸುತ್ತೇವೆ
ಹುಸಿ ಭರವಸೆಗಳ ಉದ್ದೂದ್ದ ಮಾತು
ನಾವು ಚುನುಮುರಿ ತಿನ್ನುತ್ತೇವೆ
ಜೈ ಜವಾನ್ ಜೈ ಕಿಸಾನ್
ಜೈಹಿಂದ್ ಘೋಷಣೆ
ಕಳೆದುಕೊಂಡೆವು
ಬಾಪು ಕಟ್ಟಿದ ಭಾರತ
ಈಗ ಸಿಡಿದೇಳಬೇಕಿದೆ
ಕೂಗಬೇಕಿದೆ ಹಕ್ಕುಗಳಿಗೆ
ಬರುವ ನಾಳಿಗೆ ಬದುಕ ಬೇಕಿದೆ

ಸತ್ಯ ಹೇಳುವ ಹೊತ್ತು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಸತ್ಯ ಹೇಳುವ ಹೊತ್ತು”

  1. ಬರುವ ನಾಳೆಗೆ ಬದುಕಬೇಕಿದೆ…
    ಸತ್ಯವನ್ನು ಸಾರಲು… ನಮ್ಮ ಹಕ್ಕುಗಳಿಗೆ
    ಬಡಿದಾಡಲು…. ಸಿಡಿದೇಳಲು…
    ಪ್ರಸ್ತುತ ವಾಸ್ತವ ಬಿಂಬಿಸುವ ಕವನ

  2. ನಿಮ್ಮ ಕವನದ ಒಂದೊಂದು ಮಾತು ಸತ್ಯ ಮೋಸ ವಂಚನೆಯ ರಾಜ್ಯದಲ್ಲಿ ಸತ್ಯ ಸಮಾಧಿ

Leave a Reply

You cannot copy content of this page

Scroll to Top