ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಗಜಲ್

ಸ್ವರ್ಗವ ತೊರೆದು ಭೂಮಿಗೆ ಇಳಿದು ಮೋದದಿ
ಬಂದಳೇನು ಮುಗುದೆ
ಭಾಗ್ಯದ ಬೆಳಕನು ಚೆಲ್ಲುತಲೀ ಮುದದಿ
ನಾಚುತ ನಿಂದಳೇನು ಮುಗುದೆ

ಹಣ್ಣಿನ ತಟ್ಟೆಯನು ನೆಲದಲಿ ಇರಿಸಿ ಯಾರ
ನಿರೀಕ್ಷೆಯಲ್ಲಿರುವೆ ಹೇಳು
ಕಣ್ಣಲಿ ತುಂಬಿರುವ ಕನಸಿನ ತೊಟ್ಟಿಲಲಿ
ಸಂತಸ ತಂದಳೇನು ಮುಗುದೆ

ಹಸಿರು ಸೀರೆಯಲಿ ಪ್ರಕೃತಿ ಮಾತೆಯೇ ಎದ್ದು
ಬಂದಂತಿದೆ ಇಲ್ಲಿ
ಹುಸಿನಗೆಯ ಬೀರುತಲಿ ಮದನನ ಬಾಣದಿ
ನೋಟದಿ ಕೊಂದಳೇನು ಮುಗುದೆ

ಕಾಲಲಂದುಗೆ ಗೆಜ್ಜೆಯ ಧರಿಸಿ ಕುಳಿತಿರುವೆ
ಗಲ್ಲಕೆ ಕೈಯ ಇರಿಸಿ
ಕಲಾವಿದನ ಕುಂಚದಿ ಅರಳಿರುವ ಚೆಂದವು
ತನ್ನದೇ ಅಂದಳೇನು ಮುಗುದೆ

ಸಿಂಗರಿಸಿ ತನುವ ಮಾಧವನ ಕೊಳಲನಾದ
ಆಲಿಸಿ ಆನಂದದಿ ರಾಧೆ
ಬಂಗಾರದ ಒಡವೆಯಲಿ ಕಂಗೊಳಿಸಿ ರಂಗನ
ಒಲವಲಿ ಮಿಂದಳೇನು ಮುಗುದೆ

ಅನುರಾಧಾ ರಾಜೀವ್ ಸುರತ್ಕಲ್

About The Author

Leave a Reply

You cannot copy content of this page

Scroll to Top