ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಮತಿ ಕೃಷ್ಣಮೂರ್ತಿ

ಗಜಲ್

ನದಿಗೆ ತಾನು ಸಂಭ್ರಮದಿ ಮುನ್ನಡೆಯುವ ಬಯಕೆ
ಸಾಗರಕೆ ತೋಳು ಚಾಚಿ ಬಿಗಿದಪ್ಪುವ ಬಯಕೆ

ಕುಸುಮ ದಳಕೆ ಮೆಲ್ಲನರಳಿ ದುಂಬಿಗಳಾ ಸೆಳೆದು
ಚೆಲುವನೆಲ್ಲ ಎರಕ ಹೊಯ್ದು ಸೂರೆಗೊಳುವ ಬಯಕೆ

ಸುಳಿವಗಾಳಿ ತಂತ್ರ ಹೂಡಿ ಎಲೆಯೊಂದನು ಕರೆದು
ವಿರಹಿ ಎದೆಗೆ ತಂಪುಸುದ್ದಿ ತಲುಪಿಸುವ ಬಯಕೆ

ಕೊಳದಲಿದ್ದ ನೈದಿಲೆಯ ಸಪ್ಪೆ ಮೊಗವ ನೋಡಿ
ಹುಣ್ಣಿಮೆಯ ಚಂದ್ರನಿಗೆ ತಬ್ಬಿ ಮುದ್ದಿಸುವ ಬಯಕೆ

ಪ್ರಕೃತಿಗೆ ಪ್ರೇಮಿಗಳ ಒಂದು ಮಾಡೋ ಆಸೆ
ಸುಮತಿ ಮನಕೆ ಎಲ್ಲವನ್ನೂ ಪ್ರೀತಿಸುವ ಬಯಕೆ


ಸುಮತಿ ಕೃಷ್ಣಮೂರ್ತಿ

About The Author

5 thoughts on “ಸುಮತಿ ಕೃಷ್ಣಮೂರ್ತಿ ಗಜಲ್”

  1. Excellent lines. Everyone of us has an ambition in life. Even nature too has its own ambition. You have excellently coined words to analyse how nature wants to fulfill its ambition in its own way. Beautiful poem. Congrats

  2. ನಟರಾಜ್ ಅರಳಸುರಳಿ

    ನಟರಾಜ್ ಅರಳಸುರಳಿ,
    ತುಂಬಾ ಸರಳ ಸಂಗತಿಗಳನ್ನು ಕಾವ್ಯಾತ್ಮಕವಾಗಿ ಪೋಣಿಸಿದ್ದಾರೆ ಕವಿ.
    ಇಷ್ಟವಾಯಿತು

Leave a Reply

You cannot copy content of this page

Scroll to Top