ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಜಾತಾ ರವೀಶ್

ಹೀಗೊಂದು ಯೋಚನೆ

ಆಸೆಗಳ ಹೂತು ಹಾಕಿದಾಗಲೆಲ್ಲ
ಬೀಜವಾಗಿ ಅಂಕುರಿಸಿದೆ
ಭಾವಗಳ ಗಾಳಿಗೆ ಎಸೆದಾಗಲೆಲ್ಲ
ಹಕ್ಕಿಯಂತೆ ಹಾರಾಡುತಲಿದ್ದೆ
ಹೃದಯವನು ದಹಿಸಿಬಿಟ್ಟಾಗಲೆಲ್ಲ ಬೂದಿಯಲ್ಲಿ ವಿಭೂತಿ ಮಾಡಿದೆ ಪ್ರಯತ್ನಗಳು ನೀರುಪಾಲಾದಾಗ
ಮತ್ತೆ ಈಜಿ ತಂದು ದಡ ಸೇರಿಸಿದೆ

ಹೇಳಿ ಇನ್ನೇನು ಮಾಡಬೇಕಿತ್ತು?
ಬಾಳಿನಲಿ ಆಶಾವಾದ ಬೇಕಲ್ಲವೇ?
ಭರವಸೆ ನಿರೀಕ್ಷೆಗಳು ಇರಬೇಡವೇ?
ನಾನೂ ಇನ್ನೂ ಜೀವಿಸಬೇಡವೇ?

ಅಂದುಕೊಂಡಿರುವೆ ಇನ್ನು ಮುಂದಾದರೂ

ತೇಯಿಸಿಕೊಳ್ಳುತ್ತಾ ಇಲ್ಲವಾಗುವ
ಗಂಧದ ಕೊರಡು ನಾನಾಗಿರಲಾರೆ ಉರಿಯುತ ಕರಗುವ ಮೊಂಬತ್ತಿಯಾಗಲಾರೆ
ತುಳಿದ ಪಾದವ ಹಿಸುಕಿದ ಕರಗಳ ಮೌನವಾಗಿ ಪರಿಮಳಿಸುವ ಸುಮವಾಗಲಾರೆ

ಜಲಿಸುವ ಜ್ವಾಲೆಯಾಗುವುದಿಲ್ಲ
ದಮನಿಸುವ ಶಕ್ತಿಯಾಗುವುದಿಲ್ಲ
ನಾನು ನಾನಾಗಿರಲದಷ್ಟೇ ಬಿಟ್ಟರೆ ಸಾಕು!


ಸುಜಾತಾ ರವೀಶ್

About The Author

Leave a Reply

You cannot copy content of this page

Scroll to Top