ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕುಸುತ ಮಹಾದೇವ ಕವಿತೆ-

ನಾನೇ ಜೀವದುಸಿರು

ನೆಲದೊಳು ಬಿದ್ದು ಬೀಜವಾಗಿ ಮೊಳಕೆಯೊಡೆದೆ
ಗಿಡ ಮರವಾಗಿ ಬೆಳೆವ ಕನಸು ಹೊತ್ತು ಚಿಗುರಿದೆ
ಹೂ ಕಾಯಿ ಹಣ್ಣು ಕೊಡುವ ಆಸೆಯೊಳಗಿರುವೆ
ನನಗಿಲ್ಲಿ ಬದುಕಲೂ ಬಿಡಿಯೆಂದು ನಾ ಬೇಡುವೆ.

ಬಿರು ಬಿಸಿಲಿನಲಿ ತಂಗಾಳಿ ತಂಪು ನೀಡುವೆನು
ನೆರಳ ನೀಡಿ ವಿಶ್ರಾಂತಿಗೆ ಆಶ್ರಯ ಕೊಡುವೆನು
ಶುಕಪಿಕ ಗೂಡು ಕಟ್ಟಲು ಆಸರೆಯೆ ಆಗುವೆನು
ಪಕ್ಷಿಸಂಕುಲದ ಕಲರವಕೆ ಕೊಡುಗೆಯಾಗುವೆನು.

ಮೊಳಕೆಯೊಳಗೆ ನನ್ನನ್ನೂ ತುಳಿಯದಿರು ನೀನು
ನಿನ್ನಯ ಬಾಳಿಯಾನಕೆ ಜೀವದ ಉಸಿರು ನಾನು
ಕೊಲ್ಲಲು ನೀನೆನ್ನ ಹೊಂಚು ಹಾಕಿ ಬಂದರೇನಂತೆ
ಕಾಯ್ವ ಮನುಜನೂ ವಸುಂಧರೆಯಲ್ಲಿರುವನಂತೆ.

ನನ್ನಿಂದಲೇ ಮಳೆಯೂ ಇಳೆಯೊಳಗೆ ಬೆಳೆಯೂ
ನನ್ನಿಂದಲೇ ಜೀವಿಯೂ ವಸುಧೆಯಲಿ ಕಳೆಯೂ
ನಾನಿರದಿರೆ ನಿನಗೆ ಬದುಕೆಲ್ಲಿ ಉಂಟು ಹೇಳೊಮ್ಮೆ
ಈಗಲಾದರೂ ನೀ ಬದಲಾಗಿ ಉಳಿಸು ನನ್ನೊಮ್ಮೆ.


ಶಂಕುಸುತ ಮಹಾದೇವ

About The Author

3 thoughts on “ಶಂಕುಸುತ ಮಹಾದೇವ ಕವಿತೆ-ನಾನೇ ಜೀವದುಸಿರು”

Leave a Reply

You cannot copy content of this page

Scroll to Top