ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿಜಯಪ್ರಕಾಶ್ ಸುಳ್ಯ

ಗಜಲ್

ಕಾವೇರಿಯ ಮಡಿಲು ಬರಿದಾಗುತಿರಲು ಜಲವಿಲ್ಲದೆ ಹಾಹಾಕಾರ
ಕರುನಾಡಿನ ನೆಲವು ಬರಡಾಗುತಿರಲು ಬೆಳೆಯಿಲ್ಲದೆ ಹಾಹಾಕಾರ

ನೊಂದು ಬೆಂದ ರೈತನ ವದನದಲಿ ಮಾಯವಾಗಿದೆ ಮಂದಹಾಸ
ಬೆಂದಕಾಳೂರಿನವರ ತೃಷೆಯು ನೀಗದೆ ಭುಗಿಲೆದ್ದಿದೆ ಹಾಹಾಕಾರ

ಕೈ ಬೀಸಿ ಕರೆಯುತ ಹಸಿವನು ನೀಗಿಸುತಿದೆ ಕರ್ನಾಟಕ ಎಲ್ಲರಿಗೂ
ನೆರೆಮನೆಯವರು ಖ್ಯಾತೆ ತೆಗೆಯುತಿರಲು ಕೇಳಿಸುತ್ತಿದೆ ಹಾಹಾಕಾರ

ಹರಿವನು ಮರೆತಿಹಳು ಈ ನೆಲದ ಜೀವನಾಡಿ ದಕ್ಷಿಣದ ಗಂಗೆಯು
ಬಾಯಾರಿದರೂ ನೀರು ಹರಿಸೆನ್ನುತಿರಲು ಹರಡುತ್ತಿದೆ ಹಾಹಾಕಾರ

ವಿಜಯವನು ಬೆನ್ನಟ್ಟುವುದಕೆ ಇದು ಶತ್ರುಗಳ ನಡುವಣ ಕಲಹವಲ್ಲ
ವಿವೇಚಿಸಿ ವ್ಯವಹರಿಸುವ ತನಕ ಸ್ಫೋಟಗೊಳ್ಳುತ್ತಿರುತ್ತದೆ ಹಾಹಾಕಾರ


ವಿಜಯಪ್ರಕಾಶ್ ಸುಳ್ಯ

About The Author

Leave a Reply

You cannot copy content of this page

Scroll to Top