ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿಜಗುಣಿ ಎಸ್ ಕೆಂಗನಾಳ

ಭಗವಂತನ ಆಟ

ಹಸಿವು ಎಂದವರಿಗೆ
ಆ ದೇವರು ಅನ್ನವ ಕೊಡಲಿಲ್ಲ.
ಸಾಕು ಎಂದವರಿಗೆ
ಆ ದೇವರು ಕೊಡುವುದ ಬಿಡಲಿಲ್ಲ.

ದುಡಿದು ತಿನ್ನುವವರಿಗೆ ದುಡಿಮೆಗೆ
ತಕ್ಕಂತ ಪ್ರತಿಫಲ ಸಿಗಲಿಲ್ಲ.
ತಲೆ ಹೊಡೆದು ತಿನ್ನುವವರಿಗೆ
ಕಳ್ಳತನದ ದಾರಿ ಬಿಡಲಿಲ್ಲ.

ನ್ಯಾಯವಾಗಿ ಬದುಕುವವನಿಗೆ
ಸರಿಯಾದ ದಾರಿ ಕಾಣಲಿಲ್ಲ.
ಜೇಬಿಗೆ ಕತ್ತರಿಹಾಕಿ ಬದುಕುವವರಿಗೆ
ಹಣದ ಹುಚ್ಚು ಕಡಿಮೆ ಆಗಲಿಲ್ಲ.

ಇಲ್ಲಿ ಪರರ ಬದುಕಿಗೆ ಕತ್ತರಿಹಾಕಿ
ಬದುಕಿದವನಿಗೆ ಸನ್ಮಾನ ಇಟ್ಟನಲ್ಲ.
ನ್ಯಾಯವಾಗಿ ಬದುಕುವವನಿಗೆ
ಅವನಿಂದಲೇ ಬದುಕಿನ
ನೀತಿಪಾಠದ ಬಹುಮಾನ ಕೊಟ್ಟನಲ್ಲ.

.


ನಿಜಗುಣಿ ಎಸ್ ಕೆಂಗನಾಳ

About The Author

1 thought on “ನಿಜಗುಣಿ ಎಸ್ ಕೆಂಗನಾಳ-ಭಗವಂತನ ಆಟ”

  1. ಜೀವನದ ಕಟು ಸತ್ಯಗಳನ್ನು ಅರ್ಥಗರ್ಭಿತವಾಗಿ ಬರೆದಿರುವಿರಿ

Leave a Reply

You cannot copy content of this page

Scroll to Top