ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ಮೌನ.

ಕರುಳಿನಾ ಕುಡಿ ಕೈಹಿಡಿದ
ಮಡದಿಯಾ ಬಿಟ್ಟು ನಡು
ರಾತ್ರಿಯಲಿ ಎದ್ದೋದ ಬುಧ್ಧನ ತಿರ್ಮಾನವ
ಮೌನದಿ ಸ್ವೀಕರಿಸಲಿಲ್ಲವೆ
ಯಶೋಧರೆ

ನವತಾರುಣ್ಯದ ಮಡದಿಯಾ ಬಿಟ್ಟು
ಅಣ್ಣ ಅತ್ತಿಗೆಯರೊಡನೆ
ಕಾಡಿಗೆ ತೆರಳಿದ ಪತಿಯ
ತೀರ್ಮಾನವ ಮೌನದಿ
ಸ್ವೀಕರಿಸಲಿಲ್ಲವೆ ಊರ್ಮಿಳೆ

ಬಲಗೈಯಂತಿರುವ ವಿಚಾರ ಪತ್ನಿಗೆ
ಏನೂ ಹೇಳದೆ ಕೂಡಲಕೆ ಹಾಗೆ ಹೋಗಲಿಲ್ಲವೆ
ಬಸವಣ್ಣ
ಮೌನದಿ ಸ್ವೀಕರಿಸಲಿಲ್ಲವೆ
ನೀಲಾಂಬಿಕೆ

ಮನದ ಯಾತನೆಯ ಬದಿಗೊತ್ತಿ
ಮಾಧುರ್ಯದ ಮುಗುಳ್ನಗೆಯ ಬಿತ್ತಿ
ಮೌನದಿ
ಬೆಳಗಿದರು ಒಲವೆಂಬಬತ್ತಿ
ಇದಕಿಂತ ಬೇರೆಬೇಕೆ ಸಹನಾಶಕ್ತಿ.


ಲಲಿತಾ ಪ್ರಭು ಅಂಗಡಿ

About The Author

Leave a Reply

You cannot copy content of this page

Scroll to Top