ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಮುಖವಾಡ ತೊಟ್ಟ ಮನ… !!!

ಆಸೆಯ ತೊರೆದೆನೆಂಬ
ನಾಟಕವಾಡಿ,
ದುರಾಸೆಯ ಮೋಹದ
ನಶೆಯೇರಿಸಿಕೊಂಡು,
ಬಣ್ಣದ ಬಟ್ಟೆಯಲಿ
ಹಣ,ಅಂತಸ್ತನು ಗಳಿಸಿ,
ಮಾತಿನ ಮೋಡಿಯಲಿ
ಕನಸಿನ ಗೋಪುರ
ನಿರ್ಮಿಸಿ,
ಮುಗ್ದ ಜನರ ಕಷ್ಟಗಳಿಗೆ
ಬೆಳಕೇ ತಾನೆಂದು
ನಯವಂಚಿಸಿದ,
ದೀಪದ ಬುಡಕ್ಕೆ
ಇಂದು ಕತ್ತಲು
ಆವರಿಸಿದೆ,
ಬೆಳಕಿನ ಹೆಸರಲಿ
ಮಾಡಿದ ,ಮೋಸದ
ಈಟಿಯು ತನ್ನೆದೆಯ
ಚುಚ್ಚಿ ಚುಚ್ಚಿ
ಹಿಂಸಿಸುತಿದೆ,
ಜಗದ ಮುಂದೆ
ಬೆತ್ತಲಾಗಿ ನಿಂತು
ವೇಷವ ಬದಲಿಸಿದೆ,
ಗದ್ದುಗೆಯ ಮಾನವ
ಹರಾಜು ಹಾಕಿ
ಅಧಿಕಾರ,ಹಣದಾಸೆಗೆ
ತನ್ನ ಮೌಲ್ಯದ
ಬದುಕಿಗೆ ತಾನೇ ಚಪ್ಪಡಿ
ಎಳೆದುಕೊಂಡು,
ನಲುಗುತಿದೆ,ಮುಗ್ದ ಜನರ
ಮುಂದೆ ಮುಖವಾಡ
ಕಳಚಿ ಬಿದ್ದಿದೆ…..


ಕಾಡಜ್ಜಿ ಮಂಜುನಾಥ

About The Author

Leave a Reply

You cannot copy content of this page

Scroll to Top