ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಗಜಲ್

ಬಿರಿದ ಮೊಗ್ಗಿಗೆ ಪನ್ನೀರ ಲೇಪಿಸಿ
ಭಾವನೆಗಳ ಕರೆದುಬಿಡು
ಸುರಿದ ಮಳೆಗೆ ತನುವ ಚಳಿಗೆ
ಕಾಮನೆಗಳ ಎರೆದುಬಿಡು

ಹರಿವ ನೀರಿನ ರಭಸಕೆ ಈಜುವ
ಹುಚ್ಚಾಟವೇಕೆ ಹೇಳು
ಮುರಿದು ಮೌನವ ಬೆರೆಸಿ ಪ್ರೇಮವ
ಒಲವಿನೋಲೆ ಬರೆದುಬಿಡು

ಮೆರೆಸಿ ಪಲ್ಲಕ್ಕಿಯಲಿ ಕೆಳಕ್ಕೆ ತಳ್ಳಿ
ನೋಡುವುದು ಸಮಂಜಸವಲ್ಲ
ಇರಿಸಿ ನಂಬಿಕೆ ಬಾಳಿನಲಿ ಹಳೆಯ
ನೆನಪುಗಳ ತೊರೆದುಬಿಡು

ಉರಿಸಿ ಮತ್ಸರದ ಬೆಂಕಿಯ ಸುಡದಿರು
ಕಲ್ಪನೆಯ ಕನಸನು
ಸುರಿಸಿ ಪ್ರೀತಿಯ ಧಾರೆಯನು ಹೃದಯ
ಬಾಗಿಲನು ತೆರೆದುಬಿಡು

ಬೀರಿದ ನೋಟಕೆ ರಾಧೆಯು ಸೋತು
ತನ್ಮಯಳು ಚಿನ್ಮಯನಲಿ
ಹೀರುತ ಮಕರಂಧವ ದುಂಬಿಯಾಗಿ
ಹೂವನು ಪೊರೆದುಬಿಡು


ಅನುರಾಧಾ ರಾಜೀವ್ ಸುರತ್ಕಲ್

About The Author

2 thoughts on “ಅನುರಾಧಾ ರಾಜೀವ್ ಸುರತ್ಕಲ್-ಗಜಲ್”

Leave a Reply

You cannot copy content of this page

Scroll to Top