ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲ್

ಪ್ರತೀಕಾರ

ಯಾಕೆ ಹೀಗೆ ಪ್ರತೀಕಾರದ
ಕಿಚ್ಚ ಹಚ್ಚುವ ಮನಸು
ಉಸಿರಿಗೆ ಉಸಿರಾಗಿ
ಹೃದಯಕೆ ಸನಿಹವಾಗಿ
ಸೇಡಿನ ಬಲೆಯ ಬಿಡಿಸಿ
ಮನವ ಹಸಿರಾಗಿಸೋ ಛಲ
ಎಲ್ಲರೊಳಗಿಲ್ಲವೇಕೆ?

ಜಾತಿ ಮತ ಭೇದ
ದ್ವೇಷ ಅಸೂಯೆ ಮೆಟ್ಟಿ ನಿಂತ
ಪ್ರಕೃತಿ ಪಾಠದ ಅರಿವಿಲ್ಲವೇಕೆ?
ನೋವುಂಡರು ಫಲವೀವ
ಪ್ರತೀಕಾರದ ಕಿಡಿ ಹಚ್ಚದ
ಆ ಅಸ್ಮಿತೆ ನಮಗಿಲ್ಲವೇಕೆ?

ದಡ ಸ್ಪರ್ಶಿಸಿ ಕಡಲು ತರಂಗ ಮೀಟಲು
ಪ್ರಪುಲ್ಲವಾದ ಮನವ
ಶುಭ್ರ ಆನಂದದಿ ಮುದಗೊಳಿಸಿ
ಮಧುರ ಬಾಂಧವ್ಯದ ಸಂದೇಶ ಸಾರುವ
ಅಲೆಗಳು ನಾವಾಗಬಾರದೇಕೆ?

ಕಾಲ ಜಾರುವ ಮುನ್ನ ಮನುಜ
ಒಳಿತು ಕೆಡುಕಿನ ಅರಿವಿನ ಪ್ರಶ್ನೆ
ಮನದ ಮೂಲೆಯಲಿರಲಿ
ಭೂತ ಭವಿಷ್ಯವಾ ಅರಿಯಲಾಗದ ಮನವ
ಇಂದು ಕಿಚ್ಚಿನ ಬೇಗೆಗೆ ಬಲಿಯಾಗದಿರಲಿ

ಪ್ರತೀಕಾರದ ಜ್ವಾಲಾಮುಖಿ
ಸೇಡಿಗೆ ಅಸ್ತ್ರವಾಗದಿರಲಿ
ಸಾವು ನೋವು ಕೊಡಲು ನಾವ್ಯಾರು?
ಸ್ವತಂತ್ರ ಬದುಕು ನಮ್ಮದಾಗಬೇಕು
ಪ್ರತೀಕಾರದ ಕಿಚ್ಚ ದಹಿಸಿ
ಸಹಬಾಳ್ವೆಯ ಕಹಳೆ ಸುತ್ತಲು ಮೊಳಗಲಿ.


ವಿಮಲಾರುಣ ಪಡ್ಡoಬೈಲ್

About The Author

Leave a Reply

You cannot copy content of this page

Scroll to Top