ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರುಕ್ಮಿಣಿ ನಾಯರ್ ರವರ ಕವಿತೆ

ಬುದ್ದನಾಗು!

ಬುದ್ದನಾಗಲು ಸಿದ್ದನಾಗು
ಆಸೆನಿರೀಕ್ಷೆಗಳ ಬದಿಗಿಟ್ಟಾಗ
ನೀನು ನಿನ್ನದೆಂಬುದೆಲ್ಲ
ಭ್ರಮೆಯ ಕಾಡುಮೇಡು
ಪಡೆಯುವೆಯೇನು
ಅದರೊಳಗೆ ಸುತ್ತಾಡಿ
ಬರಿ ಕಲ್ಲು ಮುಳ್ಳುಗಳಿಹವಲ್ಲಿ

ನಿನ್ನ ಬಳಸಿ ಗಿಡಗಂಟಿ
ಬೆಳೆದರೂ ಬೆದರದಿರು
ನಾನೆಂಬ ಮೋಹಕಳೆದು
ಜೊತೆಯಿರುವವು ನಿನ್ನ ಜೊತೆಯಾಗಿ

ಮೋಹವ ಕಳಚಿ
ನಿನ್ನವರೆಂಬ ಪರವಶತೆಯಿಂದ
ಹೊರಬಾ ದೃಢ ಮನಸಿನಿಂದ
ಬುದ್ದನಾಗಲು ಪ್ರಯತ್ನಿಸು

ನೆನಪಿರಲಿ ಬುದ್ದನಾಗುವುದಷ್ಟು
ಸರಳವೇನಲ್ಲ
ಮೊದಲು ತೊಡೆದು ಕಣ್ಣ ನೀರನ್ನು

ತುಂಬಿಕೊ ವೈರಾಗ್ಯ ಭಾವವನಲ್ಲಿ


ರುಕ್ಮಿಣಿ ನಾಯರ್

About The Author

5 thoughts on “ರುಕ್ಮಿಣಿ ನಾಯರ್ ರವರ ಕವಿತೆ ಬುದ್ದನಾಗು!”

Leave a Reply

You cannot copy content of this page

Scroll to Top