ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಇಮಾಮ್ ಮದ್ಗಾರ

ಕನಸು

ಮತ್ತೇರಿ
ಮಾತನಾಡುತ್ತಿಲ್ಲ
ಸಾಕಿ ಇಂದು ಗ್ಲಾಸೇ
ಕೊಡಲಿಲ್ಲ
ನಿದಿರೆ ಸನಿಹ ಸುಳಿಯುತ್ತಿಲ್ಲ
ಮಾಗಿದ ಚಳಿ
ಮರಕ್ಕೇನೂ ಹೊಸದಲ್ಲ

ನಿನ್ನ ಕದಪೆಕೋ ಕೆಂಪೇರಿದೆ
ಬೊಗಸೆಯಲಿ
ಮಧುಹೀರಿ ಬಟ್ಟಲು ಬರಿದಾಗಿದೆಯಾ ??

ನಿನ್ನಂಗೈಯಲಿ
ಬೆಳಕಬೀಜ ಹಿಡಿದು ಬಾ
ಅಮವಾಸ್ಯೆ ಇಂದು.
ನೀ ಬರುವ ದಾರಿಗೆ
ಕತ್ತಲು ಕಾಡದಿರಲಿ

ಸಿಟ್ಟು ಸೆಡುವು
ಗಳೆಲ್ಲವ ಸಿಗಿದುಹಾಕು
ಮೌನದ ಮಾತಿಗೆ
ರೆಕ್ಕಬಂದರೆ ಸಾಕು

ಕಾಲು ಕದಲಿಸುತ್ತಿಲ್ಲ
ಕಾಲ..ನೀನಿಲ್ಲದೇ
ಮನಸೇಕೊ ಕಂಪಿಸುತ್ತಿದೆ
ಎಕಾಂತ ನೆನಪಾದರೆ

ನಿರುತ್ಸಾಹದ ಮನಸಿಗೆ
ನಿಟ್ಟುಸಿರ ನೆಪವೇಕೆ ?
ಕಡಲ ಳುವಾಗ ಕಡಲಿನ
ಕಣ್ಣೀರು ಹುಡುಕುವದು
ಹೇಗೆ

ನಿನ್ನ ಎದೆಬಡಿತ
ಕೂಡಾ…
ನಿಚ್ಚಳವಾಗಿ ಕೇಳುವಂತೆ
ನಿಶ್ಯಬ್ದವಾಗಿದೆ ಈರಾತ್ರಿ..
ನನ್ನ ಕನಸಿನಂತೆ

ಮೋಡ ಬಸಿರಾದರೆ
ಕಾಮನ ಬಿಲ್ಲು
ಬಿದಿರ ತೋಟದಲ್ಲಿ
ಆನೆಯದೇ ದರ್ಬಾರು
ಬಿದಿರು ಮುರಿವ ಶಬ್ದ
ಕಿವಿಗೆ ಕರ್ಕಶ


ಇಮಾಮ್ ಮದ್ಗಾರ

About The Author

Leave a Reply

You cannot copy content of this page

Scroll to Top