ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸತೀಶ್ ಬಿಳಿಯೂರು

ಮೌಲ್ಯವಿರದ ಬದುಕು

ಮಾನವೀಯ ಮೌಲ್ಯ ತೊರೆದು
ದರ್ಪದಿಂದ ಎಲ್ಲರನ್ನು ತುಳಿದು
ಧರ್ಮಗಳ ಮಧ್ಯೆ ದ್ವೇಷ ಸೆಳೆದು
ಸಾಧಿಸುವೆ ಏನು ?ನರ ಜನ್ಮ ಪಡೆದು.

ದಾನವೀಯ ಗುಣವನ್ನು ತೊರೆದು
ಜೀವಮಾನ ಮುಗಿಯದಷ್ಟು ಪಡೆದು
ಕೂಡಿಟ್ಟರೇನು?ಫಲವಿರುವುದು
ಮನೋ ನೆಮ್ಮದಿಯನ್ನು ಕಳೆದು.

ಬಣ್ಣದ ಮಾತಿನಲ್ಲಿ ಸೆಳೆದು
ಸುಳ್ಳಿನ ಕಂತೆಗಳ ಹೆಣೆದು
ಜಗದಿ ಮೆರೆದರೇನು?ಫಲವಿರುವುದು
ಘನತೆ ಗೌರವ ಪಡೆದು


ಸತೀಶ್ ಬಿಳಿಯೂರು

About The Author

Leave a Reply

You cannot copy content of this page

Scroll to Top