ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ಗಜಲ್

Bullying

ಭುಗಿಲೆದ್ದ ಧರ್ಮದ ಬೆಂಕಿಯಲ್ಲಿ
ಅಳಿದವರ ಲೆಕ್ಕವಿಲ್ಲ
ಸೊಗವಿರುವ ಮಾನವೀಯ ಧರ್ಮವಿಲ್ಲಿ
ಹಳಿದವರ ಲೆಕ್ಕವಿಲ್ಲ

ವಿಷ ಬೀಜ ಬಿತ್ತುವ ದುರುಳರನಳಿಸಿ
ಸಮಾಜ ಸ್ವಾಸ್ತ್ಯ ಕಾಪಾಡಬೇಕಿದೆ
ಶಿವ,ಏಸು,ಅಲ್ಲಾ ಎಲ್ಲಾ ದೇವರುಗಳ ಮೂಲ
ತಿಳಿಯದವರ ಲೆಕ್ಕವಿಲ್ಲ

ಶತಶತಮಾನಗಳಿಂದ ದ್ವೇಷ, ಅಸೂಯೆ
ಸ್ವಾರ್ಥಿಗಳ ಕ್ರ್ಸ್ಶೌರ್ಯ ಮುಗಿದಿಲ್ಲ
ಪತನವಾಗದಿರುವ ಶೀತಲ ಸಮರಕೆ
ಕೈ ಜೋಡಿಸಿದವರ ಲೆಕ್ಕವಿಲ್ಲ

ಆದಿ ಅಂತ್ಯಗಳ ಕಾಣದೇ ಹಲುಬುತಿರುವುದು
ಮೂಢತನದ ಪರಮಾವಧಿ
ಈ ಧರ್ಮದ ವಿಷಜ್ವಾಲೆಯೊಳಗೆ ಸಿಲುಕಿ
ನಲುಗಿದವರ ಲೆಕ್ಕವಿಲ್ಲ

ಬುದ್ಧನ ಶಾಂತಿ ಮಂತ್ರ ಸಾರ್ವತ್ರಿಕವಾಗಿ
ಹಬ್ಬದಾಗಿದೆ ಮಾಲಾ
ಶುದ್ಧ ಮನದವರ ಶಾಂತಿಯ ಮಂತ್ರವ
ತುಳಿದವರ ಲೆಕ್ಕವಿಲ್ಲ.


ಮಾಲಾ ಚೆಲುವನಹಳ್ಳಿ

About The Author

Leave a Reply

You cannot copy content of this page

Scroll to Top