ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನವೋದಯ

ಸೌಮ್ಯ ಪ್ರಸಾದ್

ಪಡುವಣ ಕಡಲೆಡೆ ಹೊರಟಿಹ ಭಾಸ್ಕರ
ಬಾನೊಳು ಕೆಂಪಿನ ರಂಗಿನ ಹಂದರ
ಪಕ್ಷಿಯು ಹಾರುವ ನೋಟವು ಸುಂದರ
ಮೋದದಿ ನಲಿದಿದೆ ಹೃದಯದ ಮಂದಿರ

ಅನುದಿನ ತರತರ ರೂಪದಿ ನಳಿಸುತ
ಸಕಲರ ಸೆಳೆದಿದೆ ಕಣ್ಮನ ತಣಿಸುತ
ಬಕಗಳು ತನ್ಮಯವಾಗಿವೆ ನೋಡುತ
ಸಲಿಲದಿ ನಿಂದಿವೆ ತಟಸ್ಥ ವಾಗುತ

ನಭದೊಳು ಮೂಡುವ ಚಿತ್ತಾರ ವಿಸ್ಮಯ
ಮನದೊಳು ನವ ಉಲ್ಲಾಸದ ಸಂಚಯ
ಅರ್ಕನಿಗೆ ಹೇಳುತಿಹರೆಲ್ಲರು ವಿದಾಯ
ತಮ ಕಳೆದೊಡೆ ನವ ಬೆಳಕಿನ ಉದಯ


ಸೌಮ್ಯ ಪ್ರಸಾದ್

About The Author

Leave a Reply

You cannot copy content of this page

Scroll to Top