ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಯಾನ

ಸುರೇಶ ತಂಗೋಡ

ಬಟಾಬಯಲು’

ನಾರಿಯರನ್ನು ಪೂಜಿಸುವ
ನಾಡಿನಲ್ಲಿನ ನರಮೇಧ ಕೃತ್ಯ
ಅಸಹನೀಯ, ಅಮಾನವೀಯ.

ಅವಳನ್ನು ವಿವಸ್ತ್ರಗೊಳಿಸಿದಾಗ
ಕಂಡದ್ದು ಹಸಿ ಮುದ್ದೆ ಮಾಂಸವೊ,
ಬರೀ ದೇಹವೊ ನಾ ಕಾಣೆ
ಆದರೆ
ವಿಕೃತ ಮನಸ್ಸಿನ ಮಾನವರ
ಬಣ್ಣ ಬಟಾಬಯಲಾಗಿದೆ.

ಹೆಣ್ಣೆಂದರೆ ಬರೀ ಭೋಗವೇ
ಭಾಗ್ಯವಲ್ಲವೇ?
ಅವಳಿಗೂ ಒಂದು ಬದುಕಿಲ್ಲವೇ?
ಹೀನ ಕೃತ್ಯಗೈದವರಿಗಿಲ್ಲ
ಕ್ಷಮಾಪಣೆ
ಕಠಿಣ ಶಿಕ್ಷೆಯೊಂದೇ
ಅವಳಿಗೆ ನಾವು ನೀಡುವ ಸಮಾಧಾನದ ಅರ್ಪಣೆ.

ಸಮಾಜ ಹದಗೆಟ್ಟು
ಚರಂಡಿ ಮೋರಿಯಾಗಿದೆ,
ತೊಳಯಲು ಆಗದಷ್ಟು.
ಬದಲಾಯಿಸೋಣ
ಮನಗಳನ್ನು,ಮನುಷ್ಯರನ್ನು,
ಕೃತಿಗಳನ್ನು.
ಬನ್ನಿ ಮತ್ತೇ ಮಣಿಪುರದಲ್ಲಿನ ಅನ್ಯಾಯಕ್ಕೆ
ಧ್ವನಿಯಾಗೋಣ…..ಧರಣಿ ಮಾಡೋಣ….


ಸುರೇಶ ತಂಗೋಡ

About The Author

Leave a Reply

You cannot copy content of this page

Scroll to Top