ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲಲಿತಾ ಮು. ಹಿರೇಮಠ ಕವಿತೆ-

ಆಶಾಕಿರಣ

ನಿನ್ನ ಹೃದಯ ನನ್ನ ಪ್ರೀತಿಗಾಗಿ
ಎಂದಾದರೂ ಮಿಡಿಯಬಹುದೆ.
ಬೇಡವಾದ ಕಷ್ಟಗಳಿಗೆ
ನಾನು ಕೊನೆಯ ಹೇಳಬಹುದೆ.

ಕಮರಿ ಹೋದ ಕನಸುಗಳಿಗೆ
ಮತ್ತೆ ಬಣ್ಣ ತುಂಬಬಹುದೆ.
ಕರಗಿ ಹೋದ ಸುಖವ ಮತ್ತೆ
ಕಾಣಬಹುದೇ ಬದುಕ ದಾರಿಗೆ.

ಚದುರಿಹೋದ ಬಯಕೆಗಳಿಗೆ
ಮತ್ತೆ ಜೀವ ತುಂಬಬಹುದೆ.
ಬಾಡಿಹೋದ ಬಳ್ಳಿಗಿಲ್ಲಿ
ನೀರ ಸೆಲೆಯು ಸಿಗುವುದೆ.

ಆರುತಿರುವ ದೀಪಕೆ
ಎಣ್ಣೆ ಸ್ಪರ್ಶ ಸಿಗುವುದೆ.
ಸಂಚು ಮಾಡಿ ಮಿಂಚು ಇಲ್ಲೇ
ಸನಿಹದಲ್ಲಿ ಮೂಡಬಹುದೆ….?

——————–[

ಲಲಿತಾ ಮು. ಹಿರೇಮಠ.

About The Author

Leave a Reply

You cannot copy content of this page

Scroll to Top