ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಾನವ ಪ್ರಕೃತಿ

ರಜಿನಿ ಗೌಡ ಮಂಡ್ಯ

ಬಿಡಿ, ಯಾರದೋ ಭಾವನಾ ಲೋಕಕ್ಕೆ
ಬಣ್ಣವ ಬಳಿದು ಮನವ ಚಿತ್ರಿಸಬೇಡಿ
ಕತ್ತಲು ತುಂಬಿದಲಿ ಬೆಳಕ ಚೆಲ್ಲದಿದ್ದರೂ ಸರಿ
ಸಣ್ಣ ಕಾಂತಿಗೂ ಮಸಿಯ ಬಳಿಯದಿರಿ ಸಾಕು

ಏತಕೆ? ಅನುಮಾನದ ಸರಮಾಲೆ ಮಾಡಿ
ನೋಡುವವರ ಕುತ್ತಿಗೆಗೆ ಅಲಂಕರಿಸುವಿರಿ
ಓ! ನಿಮ್ಮಲ್ಲಿ ಅದೇ ಸಂಸ್ಕಾರವೇ? ಸತ್ಕಾರವೇ?
ಅಬ್ಬಾ! ಎಂತಹ ಜನುಮ? ಅರಿಯನು ಹರನೆ!

ಪರರ ಕ್ಷಣಿಕ ಸಂಭ್ರಮ ಸಹಿಸದೆ
ನಿನ್ನ ಸಂತೋಷವ ಪಣಕಿಟ್ಟು ಕೆಡವುವೆಯಾ?
ಮನುಜ, ಇದುವೇ ಜಗದ ನಿಯಮವೇ?
ತಿಳಿಸು, ಕಲಿಯುವುದಕ್ಕಲ್ಲ, ಎಚ್ಚರಿಸಿಕೊಳ್ಳುವುದಕ್ಕಷ್ಟೇ!

ಎಲ್ಲರ ಯೋಗ್ಯತೆಯ ಮುಖದಿಂದ ಅಳೆಯುವೆಯಾ?
ಗುಣವ ಗೊಣಗಿ ದೂಷಿಸುವೆಯಾ? ತಿಳಿ
ಮುಖದ ಕಾಂತಿ ಉಳಿಯಲ್ಲ! ಗುಣವು ಅಳಿಯಲ್ಲ!
ಎಚ್ಚರಿಸಿಕೊ ಮನುಜ ಕೆಡುವ ಮುನ್ನ, ಮನವ

ನೋವಿನ ಜೀವ ನಲಿವ ಬೆರೆಯುವಾಗ
ಸುಮ್ಮನಿದ್ದರೆ ಅವಮಾನವೇ ನಿನ್ನ ಜನುಮಕ್ಕೆ?
ಏತಕೆ? ಈ ಪರಿ ಆತುರ ಶಾಂತಿಯ ಸಂಹಾರಕ್ಕೆ?
ಬೇಡ ಬೇಡುವೆನು ನಿನ್ನ ಛಾಯೆ ಜಗದ ಪ್ರತಿಬಿಂಬಕ್ಕೆ!


ರಜಿನಿ ಗೌಡ ಮಂಡ್ಯ

About The Author

3 thoughts on “ರಜಿನಿ ಗೌಡ ಮಂಡ್ಯ ಕವಿತೆ-ಮಾನವ ಪ್ರಕೃತಿ”

Leave a Reply

You cannot copy content of this page

Scroll to Top