ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ

ಕದಳಿ ಹೊಕ್ಕವಳ

ಎಲ್ಲವನೂ ತೊರೆದು
ತನ್ನಿಚ್ಚೆಯ ಬದುಕಿಗೆ
ಅರಮನೆಯ ಧಿಕ್ಕರಿಸಿ
ಹೊರಟಳು ಅಕ್ಕ
ಚೆನ್ನಮಲ್ಲಿಕಾರ್ಜುನನ
ಅರಸುತ ಬೆತ್ತಲೆಯ
ಬಯಲಿನಲ್ಲಿ ಬಟ್ಟೆನುಟ್ಟ
ಭಾವ ದಿಗಂಬರೆ ಅಕ್ಕ
ಯಾರನ್ನೂ ಕಾಡಲಿಲ್ಲ
ಬೇಡಲಿಲ್ಲ
ಬಾಳ ನೂಕಿದ
ಒಂಟಿ ಸಲಗ
ಗಿಡ ಮರ ಬಳ್ಳಿ
ಪ್ರಾಣಿ ಹುಲಿ ಆನೆ ಕರಡಿ
ಇಂಪು ಹಾಡಿನ ಶುಕ ಪಿಕ
ನವಿಲು ಜೀವ ಪಕ್ಷಿ
ಗಿರಿ ಕಂದರಗಳ ಮಾರ್ಧನಿ
ಕಡಿದ ಚಂದನ ತೇಯ್ದ
ಪರಿಮಳ
ನಾರಿವಾಳ ಸಿಹಿ ಮರ್ಜನ
ಮಹಾ ಮನೆಯ ಮಗಳಾಗಿ
ಮಲ್ಲಿಕಾರ್ಜುನನ ಮಧುವಳಗಿತ್ತಿ
ದಿಟ್ಟ ನಡೆಯ ಮೂರುತಿ
ದಶ ದಿಕ್ಕು ಕಲ್ಯಾಣದ ಕಿರೂತಿ
ಒಂಬತ್ತು ಶತಕಗಳು ಉರುಳಿದವು
ಕದಳಿ ಹೊಕ್ಕವಳ
ಹೆಜ್ಜೆ ಗುರುತು ಹುಡುಕುತ
ಸಿಗಲಿಲ್ಲ ಮಹಾದೇವಿ
ಉರಿಯುಂಡ ಕರ್ಪೂರ

ಬೆಳಗಾದಳು ಬಸವನ ಮಹಾ ಮನೆಗೆ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

3 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಕದಳಿಹೊಕ್ಕವಳ”

  1. ಎಲ್ಲವನೂ ತೊರೆದು
    ತನ್ನಿಚ್ಛೆಯ ಬದುಕಿಗೆ
    ಮಲ್ಲಿಕಾರ್ಜುನನ ಮದುವಳಗಿತ್ತಿ
    ದಿಟ್ಟ ನಡೆಯ ಮೂರುತಿ
    ನಿಮ್ಮ ಕವನದಲ್ಲಿ ಅಕ್ಕಮಹಾದೇವಿಯ ವರ್ಚಸ್ಸನ್ನು ಹಿಡಿದಿಟ್ಟ ಪರಿ ಚೆಂದ

Leave a Reply

You cannot copy content of this page

Scroll to Top