ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಾರುತೇಶ್ ಮೆದಿಕಿನಾಳ

ಕಲ್ಲೆಂದು ಕಡೆಗಣಿಸದಿರು

ಲ್ಲು ಕಲ್ಲೆಂದು ಕಡೆಗಣಿಸದಿರು
ಅದರೊಳಗೆ ಅಡಗಿದೆ ದೇವರು
ಕಲ್ಲೊಳಗೆ ಮಣ್ಣು ಖನಿಜದ ಅದಿರು
ಅದರಿಂದ ಮನೆ ಮಂದಿರ ಕಟ್ಟುವರು!

ಕ್ರಿಯೆಗೊಳಗಾಗಿ ಕಲ್ಲು ಛಿದ್ರ ಛಿದ್ರ
ಅದೇ ಪಡೆಯಿತು ಮಣ್ಣಿನ ಆಕಾರ
ಕಲ್ಲೊಳಗಿದೆ ಬೆಳ್ಳಿ ಬಂಗಾರ ವಜ್ರ
ಅನೇಕ ಮೂಲ ವಸ್ತುಗಳ ಆಗರ!

ಕಲ್ಲಿನಲಿ ಕಲೆ ಅರಳಿ ಹೂವಾಯಿತು
ಆಕಾರ ಪಡೆದು ದೇವರಾಯಿತು
ಗತಕಾಲದ ವೈಭವ ವಿಜ್ರಂಭಿಸಿತು
ಇತಿಹಾಸ ಸಾರುವ ಶಿಲಾಶಾಸನವಾಯಿತು!

ಕಲ್ಲಿನಿಂದಲೇ ಕೋಟೆ ಕಟ್ಟಲಾಯಿತು
ಗುಡಿಗೋಪುರ ಶಿಲೆ ಮೂರ್ತಿಯಾಯಿತು
ಕಂಕರ್ ಸಿಮೆಂಟ್ ಕಾಂಕ್ರೆಟ್ ಆಯ್ತು
ಇತಿಹಾಸಕ್ಕೆ ಅದು ಗಟ್ಟಿ ಸಾಕ್ಷಿಯಾಯಿತು!

——-[——————

ಮಾರುತೇಶ್ ಮೆದಿಕಿನಾಳ

About The Author

Leave a Reply

You cannot copy content of this page

Scroll to Top