ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ-

ನಿನಗಾಗಿ

ಮಲ್ಲಿಗೆ ಚೆಲ್ಲುವೆನು
ನೀ ಬರುವ ಹಾದಿಯಲಿ
ಪರಿಮಳ ಹರಡಿದೆ
ಪ್ರೇಮಹೂವ ರಾಶಿಯಲಿ

ತೊಡರು ತೊಡಕಿರಲಿ
ಎದೆಗುಂದಲಾರೆ ಎಂದಿಗೂ
ಹಕ್ಕಿಯಂತೆ ಬಾನಲಿ
ತೇಲಿ ತೇಲಿ ಹಾರುವೆ

ಹರೆಯ ಹುಮ್ಮಸಿನಲಿ
ಅನುರಾಗದ ಗುಂಗಿದೆ
ನೂರಾರು ಸಾಲಿನಲಿ
ನಿನ್ನದೇ ಕವಿತೆಯಿದೆ.

ನಾನು ಬಡವನಾದರೇನು
ಒಲವಿನ ಮಹಾರಾಜನು
ಪ್ರೇಮದರಮನೆಯನು
ಪಟ್ಟದರಸಿಗೆ ಕಟ್ಟುವೆನು

ಬಾಳಗೀತೆಯ ಕಡಲಲಿ
ಬೇವು ಬೆಲ್ಲದ ತೆರೆಗಳಲಿ
ಭದ್ರವಾದ ಅಪ್ಪುಗೆಯಲಿ
ಮೆಟ್ಟಿ ಸಾಗುವೆ ಪ್ರೀತಿಯಲಿ


About The Author

Leave a Reply

You cannot copy content of this page

Scroll to Top