ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಪ್ರಕೃತಿ ಮಾತೆ

ತಲೆಯ ಬಗ್ಗಿಸಿ ಚಿಂತೆಯ ಹೊತ್ತು
ಕುಳಿತಂತೆ ಶಿಲ್ಪಿಯ ಕೆತ್ತನೆ
ಬಾಲೆಯು ಬರಲು ತಾಯಿಯ ಪ್ರೇಮ
ಉಕ್ಕಿ ಹರಿದಂತೆ ಚಿಂತನೆ

ಹಸುರಿನ ಮಡಿಲಿಗೆ ಬೇಲಿಯ ಬಿಗಿಯುತ
ತಡೆಯ ಹಾಕಿಹುದು ನೋಡು
ಬಿಸಿಲದು ಜಾರುತ ಮೋಡವು ಕವಿದಿದೆ
ಬೆಳ್ಳಕ್ಕಿ ಸೇರುತಿದೆ ಗೂಡು

ದೇವನ ಸೃಷ್ಟಿಯಲಿ ಪ್ರಕೃತಿಯ ಸೌಂದರ್ಯ
ಕಣ್ಣ ತಣಿಸುತಿದೆ ಮುದದಿ
ಭಾವನೆ ಚಿಗುರಿದೆ ಮಮತೆಯ ಬಂಧದಿ
ಮಾತೃ ವಾತ್ಸಲ್ಯ ಮನದಿ

ಕಲಾವಿದನ ಕುಂಚದಿ ಮೂಡಿದೆ ಚಿತ್ತಾರ
ಪರಿಸರ ರಕ್ಷಿಸು ಎನುತ
ಮಳೆಯೂ ಬರಲಿ ಬೆಳೆಯೂ ಆಗಲಿ
ಮರಗಿಡಗಳ ನೆಡುತ


ಅನುರಾಧಾ ರಾಜೀವ್ ಸುರತ್ಕಲ್

About The Author

Leave a Reply

You cannot copy content of this page

Scroll to Top