ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್

ಗಜಲ್

ನೀಲಿಯ ಬಾನಿನಲಿ ಬೆಳ್ಳಿಮೋಡಗಳ
ಚಿತ್ತಾರ ಬಿಡಿಸಿದವರಾರು
ಕೋಲ್ಮಿಂಚ ಬೆಳಕಲಿ ಕಾಮನಬಿಲ್ಲಿಗೆ
ಬಣ್ಣವ ತೊಡಿಸಿದವರಾರು

ಹಾರುತಿದೆ ಹಕ್ಕಿಗಳು ರೆಕ್ಕೆಯ ಬಡಿದು
ಗೂಡು ಸೇರುವಾಸೆಯಲಿ ಅಲ್ಲವೇ
ತೋರುತಿದೆ ಮುಗಿಲುಗಳು ಸರಿಯುತ
ಮಲ್ಲಿಗೆಯ ಮುಡಿಸಿದವರಾರು

ಬಿಸಿಲ ಬೇಗೆಗೆ ಇಳೆಯು ತಾಪದಿ ಬಳಲಿ
ಬೆಂಡಾಗಿಹಳು ಕೊರಗಿ
ಹಸಿರು ವನದಲಿ ಟಸಿಲು ಒಡೆದು ಹೊಸ
ಸೀರೆಯ ಉಡಿಸಿದವರಾರು

ಇಬ್ಬನಿ ತುಂತುರು ಹರಿದು ಬರಲೊಮ್ಮೆ
ಝರಿಯಂತೆ ತಂಪಾಗಲಿ ತನುವು
ಹಬ್ಬುತ ಮಿಲನದ ಹೂರಣವ ಮನದಿ
ಬಯಕೆ ಮೂಡಿಸಿದವರಾರು

ಮೇಘರಾಜನ ಸಂದೇಶ ಓದುತ್ತಾ ರಾಧೆ
ತೇಲುತಿಹಳು ಮೋಹದಲಿ
ರಾಗದಿ ಸಂಗೀತವ ಹಾಡುತ ಹೃದಯದ
ವೀಣೆಯ ನುಡಿಸಿದವರಾರು


About The Author

1 thought on “ಅನುರಾಧಾ ರಾಜೀವ್ ಸುರತ್ಕಲ್ ಗಜಲ್”

Leave a Reply

You cannot copy content of this page

Scroll to Top