ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜಿತೇಂದ್ರ ಕುಮಾರ್

ಮನದ ಅನಿಸಿಕೆ

ಶುಭ್ರ ಆಕಾಶ, ಬೀಸುವ ಗಾಳಿ
ಅತಿ ಸುಂದರವೆನಿಸುತಿದೆ
ಮುಗಿಯದ ಚಿಂತೆ, ಕಾಡುವ ನೋವು
ಎಲ್ಲವೂ ದೂರವಾಗುತಿದೆ

ಉರಿ ಬೇಸಿಗೆ, ಸುಡುತಿಹ ನೋವು
ಯಾಕೋ ಹಿತವೆನಿಸುತಿದೆ
ಪ್ರತಿಕ್ಷಣ, ಪ್ರತಿ ಗಳಿಗೆಯಲ್ಲೂ
ನಗುವದು ತಾನೇ ಮೂಡುತಿದೆ

ಚೀರುವ ಜೀರುಂಡೆ, ಹಕ್ಕಿಯ ಚಿವ್ ಚಿವ್
ನಿನ್ನದೆ ಧ್ಯಾನದಿ ಹಾಡುತಿದೆ
ಹರಿಯುವ ನೀರಲಿ, ಮುಚ್ಚಿದ ಕಣ್ಣಲಿ
ನಿನ್ನದೇ ಬಿಂಬವು ಕಾಣುತಿದೆ

ಮುಗಿಯದ ದಿಗಂತ, ಅಪಾರ ಜ್ಞಾನ
ಯೋಚನೆ ಬೇಕೇ ಹೇಳೀಗ
ನಿನ್ನೆಯ ಕತ್ತಲೆ, ನಾಳೆಯ ಬೆಳಕಿಗೆ
ಸ್ವಗತದ ಸವಿ ಜೊತೆ ಇರುವಾಗ


ಜಿತೇಂದ್ರ ಕುಮಾರ್

About The Author

Leave a Reply

You cannot copy content of this page

Scroll to Top