ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿ

ವಿದ್ಯಮಾನ

ಬೆವರು ಬರುವುದು
ಬಿಸಿಲು ಕಾದಾಗಲೇ
ಬೆವರು ಬರುವುದು
ತಪ್ಪು ಮಾಡಿದಾಗಲೇ

ನವಿರು ಇರುವುದು
ಒಲವು ಬಲಿತಾಗಲೇ
ಕನಸು ಮೆರೆವುದು
ಫಲಿತ ಆದಾಗಲೇ

ಸಿಡುಕು ಬರುವುದು
ನಲ್ಲೆ ಮುನಿದಾಗಲೇ
ಕೆಡುಕು ತರುವುದು
ಜಿದ್ದು ಬೆಳೆದಾಗಲೇ

ತಂಪು ಹರಡುವುದು
ಕಂಪು ಸಿಗುವಾಗಲೇ
ಜೊಂಪು ಹರಿಯುವುದು
ಪೆಂಪು ಬಿಡುವಾಗಲೇ


ಡಾ ಸುರೇಶ ನೆಗಳಗುಳಿ


About The Author

1 thought on “ಡಾ ಸುರೇಶ ನೆಗಳಗುಳಿ ಕವಿತೆ-ವಿದ್ಯಮಾನ”

Leave a Reply

You cannot copy content of this page

Scroll to Top