ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಧಾ ಹೊಳ್ಳ

ಕಾರಣವಾದಳು

ಸಭೀಕರೆಲ್ಲರ ಮುಂದೆ
ಸಾವನರಿಯದೆ ದುರುಳ
ಸಿಂಹಿಣಿಯ ಎಳೆದು ತರುತಿರೆ
ಸೀರೆಯ ಹಿಡಿದು
ಸುಗುಣೆಯವಳು ತಪ್ಪೇನಿಹುದು
ಸೂಚನೆಯ ಕೊಟ್ಟರೂ ಬಿಡದೆ ಎಳೆವಾಗ
ಸೃಗವಿಲ್ಲ ಕೈಯಲ್ಲಿ ನಿರಾಯುಧಳವಳು
ಸೆರಗ ಎಳೆಯುವಿಕೆಯಿಂದ ನೊಂದು
ಸೇಡಲಿ ಉರಿದಳಾಕೆ
ಸೈ ಎಂದು ಮೆರೆಯುತಿಹ ದುಷ್ಟರ ಕಂಡು
ಸೊಣಗರ ಕಾರ್ಯಕ್ಕೆ ಮರುಗಿ
ಸೋತು ಮಾಧವನ ಜಪಿಸೆ
ಸೌಭಾಗ್ಯವತಿಯ ರಕ್ಷಣೆಗೆ ಒಲಿದ ಆ ಕೃಷ್ಣ
ಸಂಕೇತವಾದಳು ನಾರಿ ಮುಂದಿನ ಸಂಹಾರಕ್ಕೆ


ಸುಧಾ ಹೊಳ್ಳ

About The Author

Leave a Reply

You cannot copy content of this page

Scroll to Top