ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗುಣಾಜೆ ರಾಮಚಂದ್ರ ಭಟ್

ಬೆವರ ಬೆಲೆ

ಬೆವರನು ಹರಿಸುತ ದಿವಸವು ದುಡಿಯುತ
ಭವದಲಿ ಸುಖವನನುಭವಿಸು..

ಮಾಡುತ ಕಾಯಕ ನೋಡುವೆ ಗೆಲುವನು
ಬಾಡದು ಸಿರಿಯು ಬದುಕಿನಲಿ..

ಕೆಲಸದಿ ತರತಮ ಮಲಿನವ ಕಾಣದೆ
ತಿಳಿಯಲು ಬೇಕು ಸಮರಸವ ..

ಹೊಟ್ಟೆಯ ಹೊರೆಯಲು ರಟ್ಟೆಗೆ ಬಲವಿದೆ
ಗಟ್ಟಿಗನಾಗು ದುಡಿಯುತಲಿ..

ಕೆಸರಲಿ ಕಳವೆಯು ಹಸಿರನು ತೋರುತ
ಹಸಿವೆಗೆ ಮದ್ದು ನೀಡುವುದು..

ಬಿತ್ತಲು ಹೊಲದಲಿ ಬತ್ತವು ಬೆಳೆಗಳು
ಸುತ್ತಲು ಕಣ್ಣ ತುಂಬುವವು🌾

ಮೇಟಿಯ ಕಾರ್ಯವು ಕೋಟಿಯ ತರುವುದು
ತೋಟದಿ ಬದುಕು ಚಿಗುರುವುದು.🌱

ಮೇಟಿ = ಕೃಷಿ ವಿದ್ಯೆ,ಕಳವೆ=ಬತ್ತ;ತರತಮ = ಭೇದ ಭಾವ .


ಗುಣಾಜೆ ರಾಮಚಂದ್ರ ಭಟ್

About The Author

1 thought on “ಗುಣಾಜೆ ರಾಮಚಂದ್ರ ಭಟ್ ಕವಿತೆ-ಬೆವರ ಬೆಲೆ”

Leave a Reply

You cannot copy content of this page

Scroll to Top