ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವ
ಹಣ ಹೆಂಡ ಸೀರೆಯ
ಆರ್ಭಟದಲಿ
ಮೌಲ್ಯವ ಕಳಕೊಂಡ
ಹಳೆಯ ನೋಟಾಗಿದೆ !!

ಜಾತಿ ಧರ್ಮದ
ಸೊಂಕಿನ ಪಟ್ಟುಗಳ
ಆರ್ಭಟದಲಿ
ಅಪೌಷ್ಟಿಕತೆಯಿಂದ
ನರಳು ರೋಗಿಯಾಗಿದೆ !!

ಭರವಸೆಯ
ಮಾತಿನ ಬಾಣಗಳ
ಆರ್ಭಟದಲಿ
ಸಮಸ್ಯೆಗಳು ಸೋತು
ಸತ್ತ ಹೆಣವಾಗಿವೆ !!

ಕರ ಭಾರವು
ಏರಿದರೂ ಮೌನದಿ
ಅನುಭವಿಸೋ
ಬೇಸಿಗೆ ಬಿಸಿಲಲಿ
ಸುರಿವ ಬೆವರಂತಾಗಿದೆ !!

ಅಭಿವೃದ್ಧಿಯ
ಹೆಸರಲಿ ಘೋಷಣೆಗಳ
ಆರ್ಭಟದಲಿ
ನೋವನುಂಡ ಜನರಿಗೆ
ಸಂತ್ವಾನದ ಮಾತಿಗೂ ಬರಬಂದಿದೆ !!

ರಾಜಕಾರಣಿಗಳು
ಕುರ್ಚಿಯ ಮೋಹದಲಿ
ಮತದಾರರ


About The Author

3 thoughts on “ಕಾಡಜ್ಜಿ ಮಂಜುನಾಥ ಕವಿತೆ-ಪ್ರಜಾಪ್ರಭುತ್ವ”

Leave a Reply

You cannot copy content of this page

Scroll to Top