ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿ

ಗಜ಼ಲ್

ಕೊಳೆತ ಪ್ರೀತಿಯ ಹಣ್ಣು ಕೊಟ್ಟರೆ ಹೇಗೆ ತಿನ್ಲಲಿ ಹೇಳು
ಹೊರಗೊಳಗ ಮರೆತು ಬಿಟ್ಟರೆ ಹೇಗೆ ಒಪ್ಪಲಿ ಹೇಳು

ಹುಳು ಹಿಡಿದ ಮನದೊಳಗೆ ಭಾವನೆಗೆ ಜಾಗವೆಲ್ಲಿ
ಮರೆತ ಸಂಭ್ರಮವ ಸುಟ್ಟರೆ ಹೇಗೆ ಅಪ್ಪಲಿ ಹೇಳು

ಬರಿಗಾಲನಿಟ್ಟು ಮುಳ್ಳ ಹಾದಿಯ ಕ್ರಮಿಸೆನ್ನುವೆಯಾ
ನೋವಿನ ಬುತ್ತಿಯ ಇಟ್ಟರೆ ಹೇಗೆ ಉಣ್ಣಲಿ ಹೇಳು

Broken heart shape paper.

ಹರಿದು ಹೋಗಿಹ ಎದೆಕವಚ ಹೊಲಿಯುವವರಾರು
ಮನಸನ್ನು ಮುರಿದು ನೆಟ್ಟರೆ ಹೇಗೆ ಕಟ್ಟಲಿ ಹೇಳು

ಕಡಿದ ನೀರು ಕಟ್ಟಕ್ಕೆ ಬರಲು ಸಾಧ್ಯವೇ ಎಂದಾದರೂ
ರಾಡಿ‌ ಮಾಡಿ ಪ್ರಣಯ ಕೆಟ್ಟರೆ ಹೇಗೆ ತಟ್ಟಲಿ ಹೇಳು

ಕೊಳು ಕೊಡೆಯ ದಾರಿಯಲೆಲ್ಲ ಬೇಲಿ ಹಾಕಿದ್ದೇಕೆ
ಕಳವಳದ ಸಂತೆಯಲಿ ಕಟ್ಟಿರೆ ಹೇಗೆ ಒಟ್ಟಲಿ ಹೇಳು

ಸರ್ವಸ್ವವೆಂದು ಕಾಲಿಗೆರಗಿಹ ಸುರೇಶನ ಧಿಕ್ಕರಿಸಲೇಕೆ
ಕಾಡುವ ಒಲವು ಕೆಟ್ಟರೆ ಹೇಗೆ ಮುಟ್ಟಲಿ ಹೇಳು

————————

About The Author

1 thought on “ಡಾ ಸುರೇಶ ನೆಗಳಗುಳಿ ಗಜ಼ಲ್”

Leave a Reply

You cannot copy content of this page

Scroll to Top