ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಭಾರತಿ ಅಶೋಕ್

ಕವಿತೆಯಾದ ಭಾವದಲಿ

ಭಾವದೊಡತಿ
ಮೌನ ಬಾಗಿಲೊಮ್ಮೆ
ತೆರೆದು ಭಾವಕೆ ಕನಸ ರೆಕ್ಕೆ ಕಟ್ಟಿ ಹಾರಿ ಬಿಡು
ಮೌನ ಮುರಿದು ಹಾಡಿಬಿಡಲಿ
ಮನದ ಕಾಜಾಣ ಕೋಗಿಲೆ

ಕಟ್ಟಿ ಕೊಡು
ನನಸಾಗದೆ ಉಳಿದ ಕನಸುಗಳ ಮೂಟೆ
ಬಿತ್ತಿ ಬರಲಿ
ಅಂತ್ಯವಿರದ ದಿಗಂತದ ಮೂಲೆಗು
ಎಲ್ಲಾದರು ಚಿಗುರಲಿ

ಮನೆಗೆ ಮರಳುವ ಮುನ್ನ
ಮತ್ತೊಮ್ಮೆ ಇಣುಕಲಿ
ಕನಸ ಬೆಳೆದ ಊರಿಗೆ
ಕನಸ ಬಿತ್ತುವ ಮಾರ್ಗ ತೋರಲು

ಮತ್ತೆಂದು ಮೌನದರಮನೆಗೆ
ಮರಳದೇ ಹಾರುತಿರಲಿ
ಹಾಡುತಿರಲಿ
ಕನಸು ನನಸಾದವರ ಸಿರಿಯ
ಕಂಡು ಕವಿತೆಯಾದ ಭಾವದಲಿ


About The Author

Leave a Reply

You cannot copy content of this page

Scroll to Top