ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನೀನಿರದ ಮೇಲೆ

ಮಧುರಾ ಮೂರ್ತಿ

ಅಂಗಳದ ತುಂಬೆಲ್ಲ ನೀನೆಟ್ಟ ಗಿಡದಲ್ಲಿ
ಮಲ್ಲಿಗೆಯು ಘಮಿಸುತಿದೆ ಕಂಪ ಸೂಸಿ
ನೂರಾರು ನೆನಪುಗಳು ಮನವ ಕದಡುತ್ತ
ನಿನ್ನನೇ ಕರೆಯುತಿದೆ ಬಾನತ್ತ ಕೈ ಬೀಸಿ

ಹೃದಯದ ತುಂಬ ರಂಗುರಂಗಿನ ಚಿತ್ತಾರ
ಬಿಡಿಸಿರುವೆ ನೀನಂದು ಓಕುಳಿಯನಾಡುತ್ತ
ಬಣ್ಣಗಳು ಮಾಸದೆಯೆ ಹಾಗೆ ಉಳಿದರೂ
ಮರೆಯಾದೆ ನೀನು ನೆನಪಾಗಿ ಉಳಿಯುತ್ತ

ನುಚ್ಚು ನೂರಾದ ಕನಸಿನಾ ಗೋಪುರದಿ
ಹೇಗಿರಲಿ ನಾನಿಂದು ಒಬ್ಬಂಟಿಯಾಗಿ
ವಂಚನೆ ನಿನಗೋ ನನಗೋ ಅರಿಯದೇ
ಬಿಕ್ಕುತಿರುವೆ ಹಗಲಿರುಳು ಬೆಪ್ಪನಂತಾಗಿ

ಸಿದ್ಧತೆ ನಡೆದಿಹುದು ವಧುವನ್ನು ಹುಡುಕಲು
ಹೆತ್ತವರ ಆಸೆಗಳಿಗೆ ಮಣಿಯಬೇಕೇ
ಒಲ್ಲದ ಮನದಿಂದ ಸಪ್ತಪದಿ ತುಳಿಯುತ್ತ
ಜೀವಂತ ಶವದಂತೆ ಬದುಕಬೇಕೇ

ಹೃದಯದಲಿ ನೀನಿಟ್ಟ ಹೆಜ್ಜೆ ಗುರುತುಗಳು
ಕೀವಾಗಿ ಸುಡಬಹುದು ನೆಮ್ಮದಿಯನು
ವಾಸ್ತವ ಅರಿಯುತ್ತ ನಿನ್ನ ಮರೆಯುತ್ತ
ಕಟ್ಟಬೇಕಿದೆ ನಾನು ಹೊಸ ಬದುಕನು..!!


ಮಧುರಾ ಮೂರ್ತಿ

About The Author

2 thoughts on “ಮಧುರಾ ಮೂರ್ತಿ ಕವಿತೆ/ನೀನಿರದ ಮೇಲೆ”

  1. ವಚನದ ಮೇಲೆ ಗಮನ ಕೊಡಬೇಕು. ಇಲ್ಲಿ ನೆನಪುಗಳು ಎಂದು ಬಳಸಿದ್ದೀರ. ಆಗ ಕರೆಯುತಿವೆ ಆಗಬೇಕು . ಆಗ ಕಾಫಿಯ ವ್ಯತ್ಯಾಸವಾಗಿ ಬಿಡುತ್ತದೆ. ಇಲ್ಲಿ ಮನವ ಕದಡುವುದು ನೂರಾರು ನೆನಪುಗಳು ಒಂದೇ ನೆನಪಲ್ಲ ಕರ್ತೃ ಕ್ರಿಯಾ ಕರ್ಮ ಇವು ಒಂದಕ್ಕೊಂದು ಅವಲಂಬಿತ . ಅನ್ಯಥಾ ಭಾವಿಸಬೇಡಿ. ….. ಗಜಲ್ ಚೆನ್ನಾಗಿದೆ

    ನಾನು ಗಮನಿಸಿದಂತೆ ಈ ವಿಷಯದಲ್ಲಿ ನಿಮಗೆ ಗೊಂದಲವಿದೆ

Leave a Reply

You cannot copy content of this page

Scroll to Top