ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪಿ ಎಸ್ ದೇಸಾಯ್.

ಗಜಲ್

ದುರುಳರ ಗಾಳಕೆ ಸಿಗುವ ಮೀನು
ನೀನಾಗಬಾರದು ಗೆಳತಿ..
ಮರುಳಾಗಿ ನಿನ್ನೊಳಗಿನ ಅರಿವು
ಮರೆಯಬಾರದು ಗೆಳತಿ..

ಸಾಹಿತ್ಯದ ಸಖ್ಯ ಮೆರೆಸಿತು
ಓದುಗರ ಎದೆಬನದಿ ಹೂವಾಗಿ..
ಈಸಿ ಜಯಿಸುವ ಜಾಡುಹಿಡಿದು ಹಿಂದೆ ನೋಡಬಾರದು ಗೆಳತಿ..

ಆಪಾದನೆಗಳ ಹೊತ್ತ ಬದುಕು ನಿಸ್ಸಾರವೆಂದು ದುಡುಕಿದೆಯಾ.
ಸೋಪಾನದ ಸೆಳೆತಗಳಿಗೆ ಸೋತು
ಬಲಿಯಾಗಬಾರದು ಗೆಳತಿ..

ಒಡಲ ಚಿಗುರು ಬಳ್ಳಿಗಳ ಆಸರೆಯ ಹೊಣೆ ಬೇರು ಹೊರಬೇಕು..
ಬರಹ ಅಸ್ತ್ರವಾದಾಗ ಸಾವಿಗೆ ಕದ ತೆರೆಯಬಾರದು ಗೆಳತಿ..

ಹುಸಿ ಬೆಳಕು ನಂಬಿ ಮಸಿ ಮೆತ್ತಿಸಿಕೊಂಡೆ ತಿರುಗಿಯೂ ನೋಡದೆ
ಶಿವೆ ಬುದ್ದಿ ಹೇಳಿದಳು ತಿದ್ದಿ
ಸಸ್ತಾ ಸರಕಾಗಬಾರದು ಗೆಳತಿ.


About The Author

Leave a Reply

You cannot copy content of this page

Scroll to Top