ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮರ ಮತ್ತು ಜೀರ್ಣೋದ್ಧಾರ

ನಾರಾಯಣ ಭಾಗ್ವತ

ಹಸಿದ ಹಕ್ಕಿಯ ಒಡಲು
ತುಂಬಿದ…ಹಣ್ಣು
ಹಿಕ್ಕೆಯಿಂದ ..ಭೂಮಿಗೆ ಬಿದ್ದ ಬೀಜ.!
ಗಿಡವಾಗಿ…ಹೆಮ್ಮರವಾಗಿ
ನೆರಳ ತಂಪನ್ನೆರೆದು…
ಅರಳಿ …ನಿಂತಿದೆ…!
ರಸ್ತೆಯ…ಪಕ್ಕ

ಪ್ರತಿದಿನ….
ಮರದ ಬುಡದಲ್ಲೀಗ ..
ಗಂಟೆಯ..ಸದ್ದು..!
ಎಂದೋ…ಬಿದ್ದೇ ಇದ್ದ
ಕಲ್ಲು..ಮೈಕೆಂಪಾಗಿಸಿ.!
ಧಡಕ್ಕನೆ..ಎದ್ದು ನಿಂತಿದೆ!

ಮರದಡಿ ..ಈಗ ಗುಸುಗುಸು
ಜೀರ್ಣೋದ್ಧಾರವಾಗಬೇಕು.!
ಗುಡಿ…….ಕಟ್ಟಿ…!!
ಆದರೆ..ಹಕ್ಕಿಯ ಹಿಕ್ಕೆ
ಗುಡಿಯ ಮೇಲೆ..ಬಿದ್ದರೆ?
ಛೇ…..
ಕತ್ತರಿಸಲೇ..ಬೇಕು..ಮರವ
ಎಂಬ ಠರಾವು….
ತಕ್ಷಣ…..
ಪೇಪರ್ ಸುರಳಿ …ಬಿಚ್ಚಿದ
ವ್ಯಕ್ತಿಯೊಬ್ಬ…ಕೂಗಿದ.
ಈ ರಸ್ತೆ ಅಗಲವಾಗುತ್ತಿದೆ
ಈಗಲ್ಲಿ….
ಗಂಟೆ-ಮರ…ಎರಡೂ
……ಅಗಲಲಿ….ದೆ.!


  ನಾರಾಯಣ ಪಿ.ಭಾಗ್ವತ

About The Author

8 thoughts on “ನಾರಾಯಣ ಭಾಗ್ವತ ಕವಿತೆ/ಮರ ಮತ್ತು ಜೀರ್ಣೋದ್ಧಾರ”

      1. N. Vijay Kumar

        ಬಹಳ ಅರ್ಥಪೂರ್ಣವಾದ ಕವನ.
        ಹುಟ್ಟು
        ಬೆಳವಣಿಗೆ
        ಉಪಕಾರ
        ಅಗಲುವಿಕೆ
        ಪ್ರತಿಯೊಂದಕ್ಕೂ ಆರಂಭ ಮತ್ತು ಅಂತ್ಯ.

  1. Shrikanth. Hegde.

    ವಾಸ್ತವ, ಕಾರ್ಮುಗಿಲಿನ ಮಧ್ಯದ ಮಿಂಚಿನಂತೆ ಹೊಳೆಯುತ್ತಿದೆ. ಈ ಕವಿತೆಯಲ್ಲಿ

Leave a Reply

You cannot copy content of this page

Scroll to Top