ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ವಿಭಾಗ

ನಾಗರತ್ನ .ಎಚ್

ಚಿತ್ತಾರ

ಮೋಡ ಸೋನೆ ಸುರಿಯಲು
ಭೂಮಿಯು ತಂಪಾಯ್ತು.

ಹಸಿರುಟ್ಟ ಭೂಮಿ ತಾಯಿಯ
ಮಡಿಲು ಕಂಗೊಳಿಸುತ್ತಿರಲು.

ಕಾಣಿಸ್ತೊಂದು ಚಿತ್ತಾರ
ಮೂಡಿತು ನೋಡು ಜಗದಗಲ.

ಬಣ್ಣ ಬಣ್ಣದ ಚಿತ್ತಾರ
ಅದುವೇ ಕಾಮನಬಿಲ್ಲಿನ ಆಕಾರ.

ಮಾನಸ ಅಮ್ಮನ ಕರೆ ತರಲು
ಕಾಮನಬಿಲ್ಲದು ಮಾಯವಾಯಿತು.

ಅಯ್ಯೋ ಎನ್ನುತ ಕೂರಲು
ಮತ್ತೆ ಮೂಡಿತು ಚಿತ್ತಾರ.

ಮಾನಸ ಹೊರಟಳು
ಖುಷಿಯಿಂದ ಶಾಲೆಗೆ ಗೆಳತಿರೊಟ್ಟಿಗೆ.


ನಾಗರತ್ನ .ಎಚ್

About The Author

1 thought on “ನಾಗರತ್ನ .ಎಚ್ ಮಕ್ಕಳ ಕವಿತೆ”

Leave a Reply

You cannot copy content of this page

Scroll to Top