ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಈರಪ್ಪ ಬಿಜಲಿ ಕೊಪ್ಪಳ

ನೇಕಾರನ ಕ(ವ್ಯ)ಥೆ

ಒಂದು ಅಣಿ ತಪ್ಪಿದರೆ
ಸಾವಿರ ಅಣಿ ತಪ್ಪಿದಂತೆ
ಹಿರಿಯರ ಅನುಭವದಲ್ಲಿದೆ
ನೇಕಾರನ ಬದುಕಿನ ಕಂತೆ
ವಸ್ತ್ರದಾನ ಮಾಡಿ ವಿವಸ್ತ್ರನಾದ ನೇಕಾರ!!

ದಾರ ದಾರ ಕೂಡಿ
ಚೂಡಿ ದಾರ ಮಾಡಿ
ಝರಿ ಝರಿ ಕೂಡಿ
ನಾರಿ ಸೀರೆ ಮಾಡಿದವ
ವಸ್ತ್ರದಾನ ಮಾಡಿ ವಿವಸ್ತ್ರನಾದ ನೇಕಾರ!!

ನೋವು ನೋವು ನುಂಗಿ
ನೇಯ್ದ ಹೊಸತು ಲುಂಗಿ
ಮಾನ ಕಾಯ್ವ ಅಂಗಿ
ಕೊಟ್ಟು ಅವನಾದ ಕಮಂಗಿ
ವಸ್ತ್ರದಾನ ಮಾಡಿ ವಿವಸ್ತ್ರನಾದ ನೇಕಾರ!!

ಪ್ರಾಣಕಿಂತ ಮಾನ ಮುಖ್ಯ
ಜಗವು ಇರಲಿ ಸದಾ ಸೌಖ್ಯ
ಧಾರೆ ಸೀರೆ ಕೊಟ್ಟನೀತ
ಕನ್ಯಾ ಸಿಗದೆ ನೊಂದನೀತ
ವಸ್ತ್ರದಾನ ಮಾಡಿ ವಿವಸ್ತ್ರನಾದ ನೇಕಾರ!!

ದೇವ ದಾನವರಿಗೆ ವಸ್ತ್ರ ನೀಡಿ
ಮಡಿ ಪಿತಾಂಬರ ವಿಪ್ರರಿಗೆ ನೀಡಿ
ದೇವರು ದೇವಲ ಋಷಿಯ ನೋಡಿ
ದೇವಾಂಗ ಕುಲವೆಂದು ಬಿರುದು ನೀಡಿ
ದೇವಲೋಕ ಮೆಚ್ಚಿದಂಥ ನೇಕಾರನಿಂದು
ವಸ್ತ್ರದಾನ ಮಾಡಿ ವಿವಸ್ತ್ರನಾದ ನೇಕಾರ!!


About The Author

1 thought on “ಈರಪ್ಪ ಬಿಜಲಿ ಕೊಪ್ಪಳ ಕವಿತೆ-ನೇಕಾರನ ಕ(ವ್ಯ)ಥೆ”

Leave a Reply

You cannot copy content of this page

Scroll to Top