ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ಸ್ವಯಂವರದಿ ಮತ್ಸ್ಯಯಂತ್ರವ ಬೇಧಿಸಿ
ಗೆದ್ದವನು ಮಧ್ಯಮ
ಜಯದ ಹಾದಿಯಲ್ಲಿ ಕೃಷ್ಣನ ಅನುನಯದಿ
ಇದ್ದವನು ಮಧ್ಯಮ

ನಭದಲ್ಲಿ ಮಿನುಗುವ ತಾರೆಯಾಗಿ ಹೊಳೆದೆ
ಧನಂಜಯ
ಸುಭದ್ರಾ ಉಲೂಪಿ ಚಿತ್ರಾಂಗದೆಯರ ಮನ
ಕದ್ದವನು ಮಧ್ಯಮ

ಸಂಬಂಧಕೆ ಬೆಲೆಕೊಟ್ಟು ಅಣ್ಣನ ಆಜ್ಞೆಯಲಿ
ಮುಳುಗಿದವನು ಈತ
ನಂಬಿದವರ ಪೊರೆಯುವ ಹೊಣೆಯ ನಿತ್ಯ
ಹೊದ್ದವನು ಮಧ್ಯಮ

ಸುತ್ತಲೋಕದಿ ಅಜೇಯನಾಗಿ ಮೆರೆದನಲ್ಲ
ಪಾಂಡವರ ಪುತ್ರ
ಹೆತ್ತ ಸುತನೊಂದು ಅರಿವಿಲ್ಲದೆ ಕಲಹಕ್ಕೆ
ಬಿದ್ದವನು ಮಧ್ಯಮ

ಗುರುಶಿರವ ನೆಲಕ್ಕುರುಳಲು ಕಾರಣನಾದನೆಂದು
ಹೇಳಿದನಲ್ಲ ಅಭಿನವ
ಹರನೊಂದಿಗೆ ಪಾಶುಪತಾಸ್ತ್ರಕೆ ಸೆಣಸಿ ವಿಜಯದಿ
ಎದ್ದವನು ಮಧ್ಯಮ


About The Author

Leave a Reply

You cannot copy content of this page

Scroll to Top