ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಅರುಣಾ ನರೇಂದ್ರ

ಇವ ಹೆಜ್ಜೆ ಇಟ್ಟಲ್ಲೆಲ್ಲ ನಗೆ ನವಿಲು ಕೇಕೆ ಹಾಕುತ್ತದೆ ಸಖಿ
ಮೌನ ಮುರಿದು ಗಿಳಿ ಮೃದು ಮಧುರ ಮಾತಾಡುತ್ತದೆ ಸಖಿ

ತಂಗಾಳಿಯ ಮೈತುಂಬ ಸಿರಿ ಗಂಧ ಸವರುವ ಚತುರ
ಇವನ ದನಿ ಕೇಳಿ ಚೈತ್ರವಿರದೆ ಕೋಗಿಲೆ ಹಾಡುತ್ತದೆ ಸಖಿ

ಲೋಕದ ನೋವಿಗೆ ಕಿವಿಯಾಗಿ ಕರಗುತ್ತಾನಿವನು
ನಾಕವೇ ಇವನ ಬಳಿ ಬರಲು ಹಂಬಲಿಸಿ ಕಾಯುತ್ತದೆ ಸಖಿ

ಹಾದಿ ಬೀದಿಯ ತುಂಬ ನಳನಳಿಸುವ ಹಸಿರು ಹಂದರ
ಇವನಿರುವ ಕಡೆ ಬಾಂಧವ್ಯದ ಬಳ್ಳಿ ಹಬ್ಬುತ್ತದೆ ಸಖಿ

ದಿನವಿಡಿ ದಣಿವಿಲ್ಲದೆ ದುಡಿವ ಸೂರ್ಯನ ಸಖನಿವನು ಕೇಳೇ
ಅರುಣಾಳ ಮೇಲಿನ ಇವನೊಲವು ನಿತ್ಯ ಪದವಾಗುತ್ತದೆ ಸಖಿ


About The Author

Leave a Reply

You cannot copy content of this page

Scroll to Top