ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅವಳು

ಸಾಕ್ಷಿ ಶ್ರೀಕಾಂತ ತಿಕೋಟಿಕರ

ಕರೆದರೂ ಕೇಳಿಸದಂತ ಮೌನ
ಮನದತುಂಬ ಅವಳದೇ ಧ್ಯಾನ
ಮುಖ ಕಾಣಲು ತವಕಿಸುವ ಮನ
ಹಗೆ ಸಾಧಿಸುವ ದುರಾಭಿಮಾನ

ಪ್ರತಿಗಳಿಗೆ ಉಲಿಯುವೆ ಹೆಸರು
ಉತ್ತರಿಸಳು ನನ್ನದು ನಿಟ್ಟುಸಿರು
ಮಳೆಬಂದು ಸುತ್ತಲ ಹಚ್ಚ ಹಸಿರು
ಮನದ ತುಂಬ ನೆನಪಿನ ಕೆಸರು

ಪಟ ಪಟನೆ ಬೀಳುವ ಮಳೆಗೆ
ಹನಿಹನಿ ಸೋರುವ ಮಾಳಿಗೆ
ಪ್ರೇಮಪಾತ್ರೆ ಹಿಡಿಯುವೆ ಬಾಳಿಗೆ
ಹಟವಾದಿ ಬರುವದಿಲ್ಲ ಬಳಿಗೆ

ತಂದ ಮಲ್ಲಿಗೆಯೂ ಮುಡಿಯಳು
ಬಾಡಿದೆ ಮನ ಏಕೆ ಮಿಡಿಯಳು
ಒಂಟಿಬಾಳಿನಂಟಿಗೆ ತೊಡಿಯಳು
ಹಟವಾದಿ ಚಿತ್ತವನು ಕಡಿಯಳು

ಹರಾಜಿಗೆ ಬಿದ್ದ ಭಾವನೆಗಳು ಬೆತ್ತಲು
ಗಳಿಗೆ ಕಳಿಯಲು ನೆನಪು ಮುತ್ತಲು
ನಗುವಳು ಬಾಳಿನಲಿ ಹಬ್ಬಿಸಿ ಕತ್ತಲು
ನಾನೆ ಹಾಕಿದ ಮಲ್ಲಿಗೆ ಪಟದ ಸುತ್ತಲೂ. .


About The Author

Leave a Reply

You cannot copy content of this page

Scroll to Top