ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಕ್ರಾಂತಿ

ಸಂಕ್ರಾಂತಿ ಹಬ್ಬ

ಕಮಲಾ ರಾಜೇಶ್

ಸಾಹಸದಿ ದುಡಿಯುವರು ದೇಶದೇಳಿಗೆ ಬಯಸಿ
ಸಾಹಸಿಗ ರೈತ ಉನ್ನತಿಕೆ ಪಡೆವ
ಸ್ನೇಹ ಬಂಧದ ಬೆಸುಗೆ ಸಂಕ್ರಾಂತಿ ಹಬ್ಬದಲಿ
ಸ್ನೇಹ ಸಂಜೀವಿನಿಯು ಕಮಲಾತ್ಮವೆ

ದೇವಾದಿದೇವರನು ಆರಾಧಿಸುವ ಹಬ್ಬ
ಗೋವುಗಳ ಶೃಂಗರಿಸಿ ನಲಿವ ಹಬ್ಬ
ನೋವುನಲಿವನು ಸರಿಸಿ ನರ್ತಿಸುವ ಹಬ್ಬದಲಿ
ಮಾವು ತೋರಣ ಕಟ್ಟಿ ಕಮಲಾತ್ಮವೆ

ಜನರೆಲ್ಲ ಸಂಕ್ರಾಂತಿಯಲಿ ಒಂದೆಡೆಗೆ ಸೇರಿ
ವಿನಯದಲಿ ನುಡಿದು ಹೋಳಿಗೆಯ ಸವಿದು
ಜನರೊಡನೆ ಬೆರೆತಾಗ ಮೈಮನವು ಪುಳಕದಲಿ
ಕನಸು ನನಸಾಗಿಸಿತು ಕಮಲಾತ್ಮವೆ

ಧನಧಾನ್ಯ ಲಕ್ಷ್ಮಿ ಮನೆಗಾಗಮಿಸುತಿಹ ಹಬ್ಬ
ದಿನಕರನು ಪಥವ ಬದಲಿಸುವ ಹಬ್ಬ
ಜನಮನದ ನೆನಪಿನಲಿ ಅಚ್ಚಳಿಯದಂತಿರುವ
ವಿನಯ ತುಂಬಿದ ಹಬ್ಬ ಕಮಲಾತ್ಮವೆ

ಹೊಸ ಕನಸು ನನಸಾಗಿಸುವ ಹಬ್ಬ ಸಂಕ್ರಾಂತಿ
ಹಸಿರು ತೋರಣ ಕಟ್ಟಿ ಶೃಂಗರಿಸುವ
ಮುಸುಕಿರುವ ಕತ್ತಲೆಯ ಸರಿಸುತ್ತ ಜೀವನದಿ
ಹಸುಗಳನು ತೊಳೆಯೋಣ ಕಮಲಾತ್ಮವೆ


About The Author

1 thought on “ಸಂಕ್ರಾಂತಿ ವಿಶೇಷ-ಕವಿತೆ-ಸಂಕ್ರಾಂತಿ ಹಬ್ಬ”

  1. ವೈ ಜಿ ಅಶೋಕ್ ಕುಮಾರ್

    ಕಮಲಾ ಅವರ ಸಂಕ್ರಾಂತಿ ಕವಿತೆ ಉತ್ತಮ ಪ್ರಯತ್ನ

Leave a Reply

You cannot copy content of this page

Scroll to Top