ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಆಶಾ ಯಮಕನಮರಡಿ

ಹೊಸ ಬೆಳಕು ಬರುತಿಹುದು ಕತ್ತಲೆಯೇ ದಾರಿ ಬಿಡು
ಆವರಿಸಿದ ತಮವನು ಕಿರಣವೇ ತೂರಿ ಬಿಡು

ನಡೆವವರ ಕಾಲುಗಳಿಗೆ ಏಕೆ ತೊಡಕಾಗುವಿರಿ
ನಿಲ್ಲದಾ ನಡಿಗೆಯಲ್ಲಿ ಗುರಿ ಸೇರಿ ಬಿಡು

ನುಡಿದಂತೆ ನಡೆದರೆ ಎಷ್ಟು ಚೆಂದ ಸಖಿ
ನಿಷ್ಟೆಯಾ ಬದುಕನ್ನು ಬದುಕಿ ತೋರಿ ಬಿಡು

ಅನವರತ ಇಲ್ಲಾರು ಇರಲು ಬಂದಿಲ್ಲಾ ಕೇಳು
ಎಲ್ಲರ ಪರವಾಗಿ ದೇವರಲ್ಲಿ ಕ್ಷಮೆಯ ಕೋರಿ ಬಿಡು

ಜಗದ ನಿಯಮಕ್ಕೆ ತಲೆ ಬಾಗಲೇ ಬೇಕು ಆಶಾ,
ಪಡೆದುದರಲ್ಲಿಯೆ ಸುಖವಿದೆ ಎಂದ ಸಾರಿ ಬಿಡು


About The Author

Leave a Reply

You cannot copy content of this page

Scroll to Top