ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಿಡಿದ ಒಲವು

ಬಿ.ಟಿ.ನಾಯಕ್

ನನ್ನಯ ಒಲವೇ ಎಲ್ಲಿಗೆ ನಿನ್ನಾ ಪಯಣ,
ತಿಳಿಯದೆನಗೆ ನಿನ್ನಾ ಮನಸಿನ ಹೂರಣ,
ನಲ್ಮೆಯ ಮುಖ ಬಾಡಿದರಿಯದು ಕಾರಣ.

ಕಾರಣ ಕೇಳ ಬಯಸಿದರೂ ದೊರೆಯದದು,
ಶಂಕೆಯ ಪ್ರೀತಿ ಕಂಡಾಗ ಅರುಹದಾಗದು,
ಬಯಸಿ ಬಂದೆ ನಾ ನಿಂತಲ್ಲಿ ನಿಲ್ಲಲಾಗದು.

ಶೃಂಗಾರ ಕಾವ್ಯ ನಿನಗಾಗಿ ಸಂಭ್ರಮಿಸಿದೆ,
ಬಂಗಾರದ ಸಹ್ಯ ನಿನಗಾಗಿ ಮೂಡಿಸಿದೆ,
ಅದೇಕೋ ನಾ ಕಾಣೆ ನಿನ್ನೊಲವು ಸಿಡಿದಿದೆ.


About The Author

Leave a Reply

You cannot copy content of this page

Scroll to Top