ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕ ಸಂಗಾತಿ

ಮಂಡಲಗಿರಿ ಪ್ರಸನ್ನರವರ

ನಿದಿರೆ ಇರದ ಇರುಳು

ಗಜಲ್ ಕೃತಿ ಲೋಕಾರ್ಪಣೆ

ಕೃತಿ: ನಿದಿರೆ ಇರದ ಇರುಳು
ಲೇ: ಮಂಡಲಗಿರಿ ಪ್ರಸನ್ನ
ಪ್ರಕಾಶಕರು: ಸ್ಪಂದನ ಪ್ರಕಾಶನ, ,ರಾಯಚೂರು
ಪುಟಗಳು: ೯೩
ಬೆಲೆ: ರೂ. ೧೧೦/-

ರಾಯಚೂರು: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇದೆ ಜ. ೨೯ ಭಾನುವಾರದಂದು ಕವಿ ಮಂಡಲಗಿರಿ ಪ್ರಸನ್ನ ಅವರ `ನಿದಿರೆ ಇರದ ಇರುಳು’ ಗಜಲ್ ಕೃತಿ ಲೋಕಾರ್ಪಣೆ ಕಾರ್ಯರ್ಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೧೧ ಕ್ಕೆ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ರಾಯಚೂರು ಆಕಾಶವಾಣಿ ಮುಖ್ಯಸ್ಥರಾದ ಡಾ.ಬಿ.ಎಂ. ಶರಭೇಂದ್ರಸ್ವಾಮಿ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕೃತಿ ಕುರಿತು ಕವಿ ಡಾ.ದಸ್ತಗೀರಸಾಬ್ ದಿನ್ನಿ ಅವಲೋಕನ ಮಾಡಲಿದ್ದಾರೆ. ಹಿರಿಯ ಸಾಹಿತಿ ವೀರಹನುಮಾನ ಅವರು ಮುಖ್ಯ ಅತಿಥಿಗಳಾಗಿದ್ದು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆವಹಿಸುವರು. ಕೃತಿಕಾರರಾದ ಮಂಡಲಗಿರಿ ಪ್ರಸನ್ನ ಉಪಸ್ಥಿತರಿರುವರು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರಾವುತರಾವ್ ಬರೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


About The Author

Leave a Reply

You cannot copy content of this page

Scroll to Top