ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಣ್ಣ ಹನಿಯ ಕಾವು ತಾಗದಿರಲಿ

ನಿಶೆ

ಕಲ್ಲ ಬೆಟ್ಟದ ನಡುವಲಿ ಅರಳಿರುವ
ಗಂಧ ಬಣ್ಣ ಹೂಹೊತ್ತ ಪುಟ್ಟ ಬೆಟ್ಟವೇ
ಬೆನ್ನು ಬೀಸಿ ಹೊರಟೆನೆಂದು
ಆ ಬಣ್ಣವೆಂದೂ ಮಾಸದಿರಲಿ

ದಾರಿಯುದ್ದಕು ಧೇನಿಸುವುದು
ಬರೀ ಬಿಕ್ಕುಗಳು ಆದಾವೆ ಹೊರತು
ನಗುವನೆಂದು ಕಟ್ಟಿಕೊಂಡು ಬರಲಿಲ್ಲ
ಭೂಮಿಗೆ ನಾ, ಅದೆಂದೂ ಧ್ಯಾನವಲ್ಲ ಬಿಡು

ಅಸಹಾಯಕ ಸ್ಥಿತಿ ನಿನ್ನದಾದರೆ
ನಿಸ್ಸಹಾಯಕಳಾದರೆ ಸೋತೀತು ಪ್ರೀತಿ
ಎಂಬ ನೋವೇನಿಲ್ಲ ನನಗೆ
ಗಂಧವೆಂದಾದರು ತನ್ನ ಗುಣ ಮರೆತದ್ದಿದೆಯೆ

ಗಾಳಿ ಬೀಸುವದನು ಬಿಟ್ಟರೆ
ಬಿಸಿಲು ಕಾವಾಗುವುದನು ತೊರೆದರೆ
ಪೈರುಗಳು ಹಸಿರಾಗುವದೆಂತು
ಜೀವಕೆ ಉಸಿರೂಡುವುದೆಂತು

ಹೂ ಹಸಿರು ಹೊತ್ತ ಬೆಟ್ಟ ನೀ
ಜಲ ಜೋಗುಳ ಹೊತ್ತ ಜನನಿ
ಗೆಂದಾದರು ರೇಖೆ ಎಳೆಯಲಾಗದು
ಬೀಸು, ಚಿಗುರು, ನೆಮ್ಮದಿಯ ನಾಳೆಗೆ

ತಾಗದಿರಲಿ ಬಿಸಿ ಉಸಿರ ಕಸರು ಕಣ್ಣಿಗೆ
ನಗುಹನಿಗಳ ಉಪ್ಪು ಕಾವು ಕಪಾಳಕೆ
ನಿಷೇದಕ್ಕೊಳಪಡಿಸಿಕೊಂಡಿರುವೆ ನನ್ನ
ನೋವ ನೆರಳು ಸೋಕದಿರಲೆಂದು ನಿನ್ನ


About The Author

Leave a Reply

You cannot copy content of this page

Scroll to Top