ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾಗೇಪಲ್ಲಿಯವರ ಗಜಲ್

ಪೊಳ್ಳು ಘನತೆ ಗಂಭೀರತೆ ಪ್ರದರ್ಶಿಸಲಿಲ್ಲಾ ಹತವಿಧೀ
ಅರಮನೆಯಲಿ ತನ್ನ ಮುಗ್ಧತೆ ಮುಚ್ಚಿಡಲಿಲ್ಲ ಹತವಿಧೀ

ಆಕೆ ಅಂದವ ಚಿತ್ರ ಸೆರೆ ಹಿಡಿಯ ಬಯಸಿದ್ದು ಎಷ್ಟು ಜನ
ಪಾಪಿಗಳಿಗೆ ಆಕೆಯ ಸ್ಥಿತಿಯ ಅರಿವಿರಲಿಲ್ಲ ಹತವಿಧೀ

ಪುಟ್ಟ ಮಕ್ಕಳೆಂದರೆ ಎಷ್ಟು ಪ್ರೀತಿ ಆ ಕೋಮಲ ಯುವರಾಣಿಗೆ
ಪ್ರೀತಿಸಿದ ಗಂಡನೇ ಅದನು ಅರಿಯಲಿಲ್ಲಾ ಹತವಿಧೀ

ರೀತಿ ರಿವಾಜ್ ಮುಖ್ಯವೆನಿಸಿತು ಮಹಾ ಸಾಮ್ರಾಜ್ಞಿಗೆ
ಸತ್ತ ನಂತರ ಕರೀಟದ ಬಗ್ಗೆ ಯೋಚಿಸಲಿಲ್ಲ ಹತವಿಧೀ

ಕೃಷ್ಣಾ! ರಾಣಿಯೆಂಬ ಬಿರದನೂ ಹೆಸರಿಂದ ತೆಗೆದು ಹೂಳಿದರು
ಕಾಪಿಟ್ಟ ರಿವಾಜುಗಳು ಕೊಂಡೊಯ್ಯಲಿಲ್ಲಾ ಹತವಿಧೀ


About The Author

Leave a Reply

You cannot copy content of this page

Scroll to Top