ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಯುದ್ದ

ನಿರ್ಮಲ ಬಟ್ಟಲ

ಮಸಣದ ಮಾರಿ
ಹೊಕ್ಕಳು ಊರಕೇರಿ
ನೆತ್ತರದ ಆಸೆಯಲಿ
ಹಸಿಮಾಂಸವ ಹಂಬಲಿಸಿ
ನೀಗಲಿಲ್ಲವಳ ಹಸಿವು ಬಾಯಾರಿಕೆ
ದಶಕಗಳ ಹಸಿವಿಗಿದು ಅರೆ ಮಜ್ಜಿಗೆ

ಹೆಣದ ರಾಶಿಯ ಮೇಲೆ
ಅಟ್ಟಹಾಸದ ಕನಸು ಕಂಡು
ಹೊಕ್ಕಳು ರಾಜನೆದೆಯ
ಗಡಿ ತಗಾದೆಗೆ ಕಿಡಿಬೆಂಕಿ
ಒಳಗೊಳಗೆ ನಿಗಿನಿಗಿಸಿತು
ಅಹಮ್ಮಿನ ಕಿಚ್ಚು

ರೊಚ್ಚಿಗೆದ್ದ ದುರಭಿಮಾನದ ಕೆಚ್ಚು
ಸಡಿಲಿಸದ ಪಟ್ಟು
ಮೊಳಗಿತು ರಣಿ ದುಂದುಭಿ
ಭೀಕರ ಯುದ್ಧವಿಗ ಹೊಸಸುದ್ದಿ
ಲೆಕ್ಕತಪ್ಪಿದ ಸಾವು ನೋವು
ಹೇಸಿಗೆ ಪಡುವಷ್ಟು ಅತ್ಯಾಚಾರ

ವೈಮಾನಿಕ ದಾಳಿ
ಪ್ರಗತಿಪತ ಈಗ ಸುಡುಗಾಡು
ಹಿಂದೆ ಕೈಕೊಟ್ಟಿತು ಸಹಾಯಹಸ್ತ
ಮಾನವೀಯತೆ ಸಮಾಧಿ
ಗೆದ್ದು ಮೆರೆವ ಸಾಮ್ರಾಜ್ಯ
ಮಾನವರೆಲ್ಲ ದಾನವರಾಗಿದ್ದಾರಿಗ

ಮಸಣದ ಮಾರಿಗಿಗ
ತಣಿದ ಮೈಮನ
ಮೈಯಡರಿದ ಸುಸ್ತು
ಮಲಗುವ ಮುನ್ನ
ಮನಮನೆಯೊಳಗೆ ಕಿಡಿ
ಹೊತ್ತಿಸುವ ಹುನ್ನಾರ

ನೆತ್ತರದ ಮಜ್ಯನದಿಮಿಂದೆದ್ದು ಸುತ್ತಲೂ ಕೇಳುವ
ಚಿತ್ಕಾರದ ಲಾಲಿಯಲಿ
ಮಲಗು ಬೇಕೆನ್ನುವ ಅವಳ
ತೊಟ್ಟಿಲು ತೂಗುತಿದೆ
ಬಸಿರಲಿಕಮರಿದ ಬ್ರೂಣ….


About The Author

3 thoughts on “ಯುದ್ದ,ಡಾ.ನಿರ್ಮಲ ಬಟ್ಟಲ ಕವಿತೆ”

Leave a Reply

You cannot copy content of this page

Scroll to Top