ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮೆಲ್ಲರ ಅಚ್ಚುಮೆಚ್ಚಿನ, ಆತ್ಮೀಯರಾದ ಡಾ. ಎಚ್ ಎಲ್ ಪುಷ್ಪಾ ಮೇಡಂ ಮೊನ್ನೆ ಭಾನುವಾರ ನಡೆದ

” ಕರ್ನಾಟಕ ಲೇಖಕಿಯರ ಸಂಘ ” ದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಅಭಿನಂದನೆಗಳು ಮೇಡಂ.

ಹೆಚ್.ಎಲ್.ಪುಷ್ಪರವರು ದೊಡ್ಡಬಳ್ಳಾಪುರದ ಹೊಸಳ್ಳಿ ಉಜ್ಜನಿಯಲ್ಲಿ 18 ನೇ ಸೆಪ್ಟಂಬರ್‌ 1962ರಂದು  ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ವಿಜ್ಞಾನದಲ್ಲಿ ಪದವಿಯನ್ನು , ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ರಾಜ್ಯದ ವಿವಿಧ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದು,  ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ‘ ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ‘ ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.‌ಡಿ ಪದವಿ ಪಡೆದಿರುತ್ತಾರೆ.

ಪುಷ್ಪರವರ ಪ್ರಮುಖ ಕೃತಿಗಳೆಂದರೆ

ಅಮೃತಮತಿಯ ಸ್ವಗತ ,

ಗಾಜುಗೊಳ,

ಮದರಂಗಿ ,

ವೃತ್ತಾಂತ ,

ಲೋಹದ ಕಣ್ಣು (ಕವನ ಸಂಕಲನ),

ಭೂಮಿಲ್ಲ ಇವಳು,

ಗೆಲ್ಲಲಾರ್ಕುಮೆ ಮೃತ್ಯುರಾಜನಂ ,

ಪರ್ವಾಪರ್ವ (ನಾಟಕ),

ಅವಲೋಕನ,

ಗಂಧಗಾಳಿ,

ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ (ವಿಮರ್ಶೆ)

ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಾಗೆ ಪುಷ್ಪರವರು ದೆಹಲಿ, ಸಿಕ್ಕಿಂ, ಭುವನೇಶ್ವರಗಳಲ್ಲಿ ನಡೆದ ರಾಷ್ಟ್ರೀಯ ಕವಿಗೋಷ್ಠಿ ಹಾಗೆ ಅನೇಕ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.

‘ ಸ್ತ್ರೀ ಎಂದರೆ ಅಷ್ಟೇ ಸಾಕೆ ’ ವಿಮರ್ಶಾ ಸಂಕಲನಕ್ಕೆ 2015ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. 2018ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ ಸಾಹಿತ್ಯ ಶ್ರೀ ‘  ಗೌರವ ಪ್ರಶಸ್ತಿ ಸಂದಿದೆ. ಮಂತ್ರಂ ಆರ್ಟ್ಸ್ ಸಂಸ್ಥೆಯ ಆಫ್ರಿಕಾದ ಪ್ರಸಿದ್ದ ಕವಿಯತ್ರಿ ‘ ಮಾಯಾ ಏಂಜಲೋ ‘ ಹೆಸರಿನ ಕಾವ್ಯ ಪುರಸ್ಕಾರ, ನಾಡಚೇತನ ಸಂಸ್ಥೆಯ ಗೌರವ ಪುರಸ್ಕಾರ , ಆರ್ಯಭಟ ಪ್ರಶಸ್ತಿ, ಪು.ತಿ.ನ.ಕಾವ್ಯ ಪುರಸ್ಕಾರ, ಕಡೆಂಗೋಡ್ಲು ಶಂಕರಭಟ್‌ ಕಾವ್ಯ ಪ್ರಶಸ್ತಿ ,  ಸಾರಂಗಮಠ ಪಾಟೀಲ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಸದ್ಯ  ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಇವರ ” ರಸಗ್ರಹಣ ” ಅಂಕಣ ಪ್ರಕಟಗೊಳ್ಳುತ್ತಿದೆ.

ಎರಡು ವರ್ಷದ ಹಿಂದೆ ನಮ್ಮ ಒಂದು ಸಮಾರಂಭಕ್ಕೆ ಪುಷ್ಪ ಮೇಡಂ ಅನುಮತಿ ಪಡೆಯದೆ ಅವರ ಹೆಸರನ್ನು ಹಾಕಿ , ಆಹ್ವಾನ ಪತ್ರಿಕೆ ಕಳಿಸಿದ್ದೆ. ಹಾಗೆ ಅವರಲ್ಲಿ ಕ್ಷಮೆ ಕೇಳಿ, ಬನ್ನಿ ಎಂದಿದ್ದೆ. ಬಂದು ತುಂಬಾ ಅರ್ಥಪೂರ್ಣ ಮಾತುಗಳನ್ನಾಡಿದ್ದರು. ಅವರ ಸರಳ , ಸಜ್ಜನಿಕೆಗೆ ಇದು ಸಾಕ್ಷಿ..

ಸಾಹಿತ್ಯ ಲೋಕದಲ್ಲಿ ಸಾಕಷ್ಟು ಗುರುತಿಸಿಕೊಂಡಿರುವ ಪುಷ್ಪ ಮೇಡಂರವರ  ನಾಯಕತ್ವದಲ್ಲಿ ಒಂದಷ್ಟು ಆರೋಗ್ಯಕರ ಚಿಂತನೆಗಳು ಮೂಡಲಿ ಎಂದು ಹಾರೈಸುವೆ.

ಹೆಚ್.ಎಲ್.ಪುಷ್ಪರವರು ದೊಡ್ಡಬಳ್ಳಾಪುರದ ಹೊಸಳ್ಳಿ ಉಜ್ಜನಿಯಲ್ಲಿ 18 ನೇ ಸೆಪ್ಟಂಬರ್‌ 1962ರಂದು  ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ವಿಜ್ಞಾನದಲ್ಲಿ ಪದವಿಯನ್ನು , ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ರಾಜ್ಯದ ವಿವಿಧ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದು,  ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ‘ ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ‘ ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.‌ಡಿ ಪದವಿ ಪಡೆದಿರುತ್ತಾರೆ.

ಪುಷ್ಪರವರ ಪ್ರಮುಖ ಕೃತಿಗಳೆಂದರೆ

ಅಮೃತಮತಿಯ ಸ್ವಗತ ,

ಗಾಜುಗೊಳ,

ಮದರಂಗಿ ,

ವೃತ್ತಾಂತ ,

ಲೋಹದ ಕಣ್ಣು (ಕವನ ಸಂಕಲನ),

ಭೂಮಿಲ್ಲ ಇವಳು,

ಗೆಲ್ಲಲಾರ್ಕುಮೆ ಮೃತ್ಯುರಾಜನಂ ,

ಪರ್ವಾಪರ್ವ (ನಾಟಕ),

ಅವಲೋಕನ,

ಗಂಧಗಾಳಿ,

ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ (ವಿಮರ್ಶೆ)

ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಾಗೆ ಪುಷ್ಪರವರು ದೆಹಲಿ, ಸಿಕ್ಕಿಂ, ಭುವನೇಶ್ವರಗಳಲ್ಲಿ ನಡೆದ ರಾಷ್ಟ್ರೀಯ ಕವಿಗೋಷ್ಠಿ ಹಾಗೆ ಅನೇಕ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.

‘ ಸ್ತ್ರೀ ಎಂದರೆ ಅಷ್ಟೇ ಸಾಕೆ ’ ವಿಮರ್ಶಾ ಸಂಕಲನಕ್ಕೆ 2015ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. 2018ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ ಸಾಹಿತ್ಯ ಶ್ರೀ ‘  ಗೌರವ ಪ್ರಶಸ್ತಿ ಸಂದಿದೆ. ಮಂತ್ರಂ ಆರ್ಟ್ಸ್ ಸಂಸ್ಥೆಯ ಆಫ್ರಿಕಾದ ಪ್ರಸಿದ್ದ ಕವಿಯತ್ರಿ ‘ ಮಾಯಾ ಏಂಜಲೋ ‘ ಹೆಸರಿನ ಕಾವ್ಯ ಪುರಸ್ಕಾರ, ನಾಡಚೇತನ ಸಂಸ್ಥೆಯ ಗೌರವ ಪುರಸ್ಕಾರ , ಆರ್ಯಭಟ ಪ್ರಶಸ್ತಿ, ಪು.ತಿ.ನ.ಕಾವ್ಯ ಪುರಸ್ಕಾರ, ಕಡೆಂಗೋಡ್ಲು ಶಂಕರಭಟ್‌ ಕಾವ್ಯ ಪ್ರಶಸ್ತಿ ,  ಸಾರಂಗಮಠ ಪಾಟೀಲ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಸದ್ಯ  ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಇವರ ” ರಸಗ್ರಹಣ ” ಅಂಕಣ ಪ್ರಕಟಗೊಳ್ಳುತ್ತಿದೆ.

ಎರಡು ವರ್ಷದ ಹಿಂದೆ ನಮ್ಮ ಒಂದು ಸಮಾರಂಭಕ್ಕೆ ಪುಷ್ಪ ಮೇಡಂ ಅನುಮತಿ ಪಡೆಯದೆ ಅವರ ಹೆಸರನ್ನು ಹಾಕಿ , ಆಹ್ವಾನ ಪತ್ರಿಕೆ ಕಳಿಸಿದ್ದೆ. ಹಾಗೆ ಅವರಲ್ಲಿ ಕ್ಷಮೆ ಕೇಳಿ, ಬನ್ನಿ ಎಂದಿದ್ದೆ. ಬಂದು ತುಂಬಾ ಅರ್ಥಪೂರ್ಣ ಮಾತುಗಳನ್ನಾಡಿದ್ದರು. ಅವರ ಸರಳ , ಸಜ್ಜನಿಕೆಗೆ ಇದು ಸಾಕ್ಷಿ..

ಸಾಹಿತ್ಯ ಲೋಕದಲ್ಲಿ ಸಾಕಷ್ಟು ಗುರುತಿಸಿಕೊಂಡಿರುವ ಪುಷ್ಪ ಮೇಡಂರವರ  ನಾಯಕತ್ವದಲ್ಲಿ ಒಂದಷ್ಟು ಆರೋಗ್ಯಕರ ಚಿಂತನೆಗಳು ಮೂಡಲಿ ಎಂದು ಹಾರೈಸುವೆ.


ಡಾ. ಎಂ. ಈ. ಶಿವಕುಮಾರ ಹೊನ್ನಾಳಿ

About The Author

1 thought on “ಡಾ. ಎಚ್ ಎಲ್ ಪುಷ್ಪಾ  ” ಕರ್ನಾಟಕ ಲೇಖಕಿಯರ ಸಂಘ ‘ಕ್ಕೆ ಆಯ್ಕೆ”

Leave a Reply

You cannot copy content of this page

Scroll to Top