ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸತ್ತು ಬದುಕುವುದೆಂದರೆ..

(ಮೆದುಳು ನಿಷ್ಕ್ರಿಯಾಗಿ ಸಾವನ್ನಪ್ಪಿದ
ರಕ್ಷಿತಾ ತನ್ನ ಅಂಗಾಂಗಗಳ ದಾನ ಮಾಡಿ
ಸಾವಿನಲ್ಲಿಯೂ ಸಾರ್ಥಕತೆ ಮೆರೆದ
ರಕ್ಷಿತಾಳ ನೆನಪಿಗಾಗಿ
)

ದಿ.ರಕ್ಷಿತಾ

ಸತ್ತು ಬದುಕುವುದೆಂದರೆ
ಇದೆ ಇರಬೇಕು ಮಗಳೆ….

ಸುಟ್ಟರೆ ಬೂದಿಯಾಗುವ
ಹೂತರೆ ಕೊಳೆತು ಹೋಗುವ
ಈ ದೇಹಕೆ ಮತ್ತೆ
ಜೀವ ಕೊಡುವುದೆಂದರೆ
ಇದೆ ಇರಬೇಕು ಮಗಳೆ…

ಮತ್ತೆ ಮಿಡಿಯಲಿ ನಿನ್ನ
ಹೃದಯ ಮಾನವೀಯತೆಗೆ
ಅಂಧಕಾರವ ಅಳಿಸಿ
ಬಾಳ ಬೆಳಗಲಿ ನಿನ್ನ ಕಣ್ಣು
ಹಲವರ ಜೀವನ್ಮರಣದ
ಹೋರಾಟ ಗೆಲ್ಲಿಸಲಿ ನಿನ್ನ
ಇನ್ನುಳಿದ ಅಂಗಗಳು….

ಅಳಿದ ಕಾಯದಲ್ಲಿ
ಮತ್ತೆ ಅರಳಿದ ಹೂವಾಗಿ
ನೊಂದವರ ಮೊಗದಲ್ಲಿ
ನಗುವ ಚೇತನವಾಗಿ
ಸಾವ ಸಾರ್ಥಕ ಮಾಡಿಕೊಂಡ
ನಿನ್ನಜನ್ಮ ಸಾರ್ಥಕ ಮಗಳೆ ….


ಡಾ. ನಿರ್ಮಲ ಬಟ್ಟಲ

About The Author

Leave a Reply

You cannot copy content of this page

Scroll to Top